‘ಭಗವಾನ್ ಬುದ್ಧ’ ಡಾ. ಮಹೇಂದ್ರ ಮಿತ್ತಲ್ ಅವರ ಕೃತಿಯನ್ನು ಹ.ಚ. ನಟೇಶ್ ಬಾಬು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮನುಜ ಕುಲಕ್ಕೆ ಸತ್ಯ, ಅಹಿಂಸೆ, ಕರುಣೆ, ದಯೆ, ಭ್ರಾತೃತ್ವದ ಸಂದೇಶ ಸಾರಿದ ಮಹಾವಿಮೋಚಕ ಬುದ್ಧನ ಜೀವನಚರಿತ್ರೆಯನ್ನು ಸರಳ ಕನ್ನಡದಲ್ಲಿ ನೀಡಲಾಗಿದೆ. ವಸಂತ ಪ್ರಕಾಶನ ಮಕ್ಕಳಿಗಾಗಿ ದೇಶ ವಿದೇಶಗಳ ಸ್ವಾರಸ್ಯ ಕಥೆಗಳು ಮಾಲೆಯಲ್ಲಿ ಪ್ರಕಟಿಸಿದ ಮಹಾತ್ಮರ ಜೀವನ ಚರಿತ್ರೆಗಳಲ್ಲಿ ಈ ಕೃತಿಯೂ ಒಂದು. ಮಕ್ಕಳಲ್ಲಿ ಅಹಿಂಸೆ, ಸತ್ಯ, ಸಮಾನತೆಯ ಭಾವನೆಗಳನ್ನು ತುಂಬುವ ಸಲುವಾಗಿ ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಭಗವಾನ್ ಬುದ್ಧನ ಜೀವನಚರಿತ್ರೆಯನ್ನು ನೀಡಲಾಗಿದೆ.
©2023 Book Brahma Private Limited.