ಮಹಾತ್ಮಗಾಂಧಿ (ರಾಮಮನೋಹರ ಲೋಹಿಯಾ ಅವರು ಕಂಡಂತೆ)

Author : ಬಿ.ಎ. ಸನದಿ

Pages 40

₹ 22.00




Year of Publication: 2018
Published by: ಶ್ರೀ ಅರವಿಂದ ಪ್ರಕಾಶನ,
Address: ಬೆಂಗಳೂರು

Synopsys

ರಾಜಕೀಯ ಮುತ್ಸದ್ಧಿ ಡಾ. ರಾಮ ಮನೋಹರ ಲೋಹಿಯಾ ಅವರು ಕಂಡಂತೆ ಎಂಬ ಉಪಶೀರ್ಷಿಕೆಯಡಿ ಲೇಖಕ ಬಿ.ಎ.. ಸನದಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಹಾತ್ಮಗಾಂಧಿ. ರಾಮ ಮನೋಹರ ಲೋಹಿಯಾ ಅವರು ಭಾರತ ಕಂಡ ಅದ್ವಿತೀಯ ಮುತ್ಸದ್ಧಿ. ಅವರ ರಾಜಕೀಯ ಚಿಂತನೆಗಳ ತೀಕ್ಷ್ಣತೆ ಮಾತ್ರವಲ್ಲ; ಅವುಗಳ ಸಾಮಾಜಿಕ ಮಹತ್ವ ಹಾಗೂ ಭಾರತದ ವಿಕಾಸದಲ್ಲಿಯ ಅಗತ್ಯಗಳು ಕುರಿತಂತೆ ಹೆಚ್ಚಿನ ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಭಾರತದ ಸಾಮರಸ್ಯವನ್ನು, ಸಂಸ್ಕೃತಿಯನ್ನು ಕುರಿತು ಹೊಸ ನಿಟ್ಟಿನಲ್ಲಿ ವ್ಯಾಖ್ಯಾನಿಸಿದ ಚಿಂತನೆಗಳು ಬಹುತೇಕ ಸಮಾಜವಾದಿಗಳನ್ನು ರೂಪಿಸಿದ್ದರಲ್ಲಿ ಪ್ರಮುಖವಾದವು. ಇಂತಹ ಮುತ್ಸದ್ಧಿಯು ಮಹಾತ್ಮಗಾಂಧಿ ಅವರ ವ್ಯಕ್ತಿತ್ವ ಕುರಿತು ಬರೆದ ಚಿಂತನೆಗಳಿಗೆ ಹೆಚ್ಚು ಮಹತ್ವವಿದೆ. ಯಾವ ಆಯಾಮಗಳ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಎಂಬ ವ್ಯಕ್ತಿತ್ವವು ಭಾರತಕ್ಕೆ ಮಾತ್ರವಲ್ಲ; ವಿಶ್ವಕ್ಕೂ ಮಹತ್ವ ಪಡೆದಿದೆ ಎಂಬುದನ್ನು ರಾಮ ಮನೋಹರ ಲೋಹಿಯಾ ಅವರು ತಮ್ಮದೇ ಆದ ಚಿಂತನೆಗಳಿಂದ ವಿವರಿಸಿದ್ದಾರೆ. ಹೀಗಾಗಿ, ಈ ಕೃತಿಗೆ ರಾಜಕೀಯ ಹಾಗೂ ಸಾಮಾಜಿಕ ಮಹತ್ವ ಬಂದಿದೆ.

About the Author

ಬಿ.ಎ. ಸನದಿ
(18 August 1933 - 31 March 2019)

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು.  ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ...

READ MORE

Related Books