ಭಾರತೀಯ ಸಂಸ್ಥಾನಗಳ ಏಕೀಕರಣ

Author : ಸೊಂದಲಗೆರೆ ಲಕ್ಷ್ಮೀಪತಿ

Pages 514

₹ 500.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9964124831

Synopsys

ಭಾರತವು ಬ್ರಿಟಿಷರಿಂದ ಸ್ವಾತಂತ್ಯ್ರ ಪಡೆದ ನಂತರ ಅಂದಿನ ಗೃಹಸಚಿವ ವಲ್ಲಭಭಾಯಿ ಪಟೇಲರಿಗೆ ಕಾಡಿದ ಬಹುದೊಡ್ಡ ಸಮಸ್ಯೆ ಎಂದರೆ , ಭಾರತದಲ್ಲಿಯ ನೂರಾರು ಸಂಖ್ಯೆಯಲ್ಲಿಯ ಸಣ್ಣಸಣ್ಣ ಸಂಸ್ಥಾನಗಳನ್ನು ಸ್ವತಂತ್ಯ್ರ ಭಾರತದಲ್ಲಿ ವಿಲೀನಗೊಳಿಸುವುದು. ಈ ಕುರಿತಂತೆ ಲೇಖಕ ಸೊಂದಲಗೆರೆ ಲಕ್ಷ್ಮೀಪತಿ ಅವರ ಕೃತಿ-ಭಾರತೀಯ ಸಂಸ್ಥಾನಗಳ ಏಕೀಕರಣ. ಲೇಖಕ ವಿ.ಪಿ.ಮೆನನ್ ಅವರ ಮೂಲ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳಲು ಎಲ್ಲ ಸಂಸ್ಥಾನಗಳಿಗೆ ಮೊದಲು ಸೂಚನೆ ಕೊಡಲಾಯಿತು. ಬಹುತೇಕರ ಸಂಸ್ಥಾನಗಳ ಸಾಮಂತರು ಒಪ್ಪಿದರು. ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅವರ ಮೇಲೆ ಸೈನ್ಯದ ದಾಳಿ ನಡೆಸಿ ವಿಲೀನಗೊಳಿಸಿ ಕೊಳ್ಳಲಾಯಿತು. ಆದರೆ, ಹೈದ್ರಾಬಾದ್ ನಿಜಾಮನು ಮಾತ್ರ ತನ್ನ ಸಂಸ್ಥಾನ ವಿಲೀನಗೊಳಿಸಲು ನಿರಾಕರಿಸಿ, ಸುಮಾರು ಒಂದು ವರ್ಷದವರೆಗೂ ತಾನೇ ಆಳುತ್ತಿದ್ದ. ಏನೆಲ್ಲ ಸೂಚನೆಗಳನ್ನು ಧಿಕ್ಕರಿಸಿದ್ದ ಪರಿಣಾಮ, ಗೃಹಸಚಿವ ವಲ್ಲಭಬಾಯಿ ಪಟೇಲರು ನಿಜಾಮನ ಆಡಳಿತ ಪ್ರದೇಶದ ಮೇಲೆ ಸೈನ್ಯವನ್ನು ದಾಳಿ ಮಾಡಿಸಿ ವಶಪಡಿಸಿಕೊಂಡರು. ಇಂತಹ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಕೃತಿ ಇದು.

About the Author

ಸೊಂದಲಗೆರೆ ಲಕ್ಷ್ಮೀಪತಿ

ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...

READ MORE

Related Books