ಪೆರಿಯಾರ್ ನೋಟದಲ್ಲಿ ಇಸ್ಲಾಂ

Author : ಬಿ. ಸುಜ್ಞಾನಮೂರ್ತಿ



Year of Publication: 2022
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಜಿ.ಅಲೋಶಿಯಸ್ ಅವರು ಸಂಫಾದಿಸಿರುವ ಕೃತಿಯನ್ನು ಲೇಖಕ ಬಿ. ಸುಜ್ಞಾನಮೂರ್ತಿ ಪೆರಿಯಾರ್ ನೋಟದಲ್ಲಿ ಇಸ್ಲಾಂ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪೆರಿಯಾರ್ ಹೆಸರು ಕೇಳಿದ ಕೂಡಲೆ ಮಂದಿಗೆ ಒಬ್ಬ ಜಿಡ್ಡು ಗಟ್ಟಿದ ನಾಸ್ತಿಕ ಎಂಬ ಚಿಂತನೆ ಹುಟ್ಟುತ್ತದೆ. ಆದರೆ ಅವರು ದೇವರನ್ನು ನಂಬದ ಮಾತು, ವಿಶೇಷವಾಗಿ ಬಗೆಬಗೆಯ ರೂಪಗಳಲ್ಲಿ ಅಸಂಖ್ಯಾತವಾಗಿರುವ ಹಿಂದೂ ದೇವರುಗಳನ್ನು ಅಸಹ್ಯಪಟ್ಟುಕೊಂಡ ಮಾತು ನಿಜವೇ ಆದರೂ ಪೆರಿಯಾರ್ ಗುರಿ ನಾಸ್ತಿಕತೆಯ ಪ್ರಚಾರ ಅಲ್ಲವೇ ಅಲ್ಲ. ಈ ದೇಶದ ಜನರಲ್ಲಿ ಆತ್ಮಗೌರವವನ್ನು ಬೆಳೆಸುವುದಾಗಿತ್ತು.ಪೆರಿಯಾರ್ ಅವರ ಕುರಿತ ಲೇಖನ ಈ ಕೃತಿಯ ಜೀವಾಳ.

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books