ದಿಲೀಪ

Author : ಟಿ. ಕೇಶವ ಭಟ್ಟ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ದಿಲೀಪ ಪುರಾಣ ಪುರುಷರ ಜೀವನಗಾಥೆ ಪುಸ್ತಕವನ್ನು ಲೇಖಕ ಟಿ. ಕೇಶವ ಭಟ್ಟ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ರಾಜ ದಿಲೀಪನ ಕುರಿತಾಗಿ ಮಹಾಪರಾಕ್ರಮಿ ಚಕ್ರವರ್ತಿಯಾದರೂ ತಾನು ಸೇವಿಸುತ್ತಿದ್ದ ಗೋವಿನ ರಕ್ಷಣೆಗಾಗಿ ಸ್ವತಃ ತನ್ನ ಪ್ರಾಣವನ್ನೇ ಬಲಿದಾನ ಗೈಯಲು ಸಿದ್ಧನಾದ ಕರ್ತವ್ಯನಿಷ್ಠ, ಹಿರಿಯ ಅಧಿಕಾರದಲ್ಲಿರುವವರ ಜೀವನ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕೀರ್ತಿವಂತ ಎಂದು ಲೇಖಕರು ಕೃತಿಯಲ್ಲಿ ದಿಲೀಪನ ಮಹತ್ವವನ್ನು ಸಾರುತ್ತಾರೆ. ರಾಜ ದಿಲೀಪ ಪುರಾಣದಲ್ಲಿ ಬರುವ ಮಹತ್ವಪೂರ್ಣ ಪಾತ್ರ. ಈತನ ಅಡಳಿತ ವೈಖರಿ, ತನ್ನ ತಪ್ಪಿನ ಬಗೆಗೆ ಅರಿವಾದಾಗ ಆತ ನಡೆಯುವ ರೀತಿ, ಇತರ ರಾಜರಿಗೆ ಮಾದರಿಯಾಗುವ ಬಗೆ, ಎಷ್ಟೇ ಯುಗ ಕಳೆದರೂ ಆತ ಹೇಗೆ ಪ್ರೇರಣಾ ಶಕ್ತಿಯಾಗುತ್ತಾನೆ ಎಂಬುದನ್ನು ಸವಿಸ್ತಾರವಾಗಿ ಆತನ ಜೀವನದ ಬಗೆಗೆ ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಟಿ. ಕೇಶವ ಭಟ್ಟ
(02 February 1920 - 20 August 2005)

ಕವಿಯಾಗಿದ್ದ ಟಿ. ಕೇಶವಭಟ್ಟ ಅವರು ಛಂದಸ್ಸು, ವ್ಯಾಕರಣ, ಅಲಂಕಾರ ಸೇರಿದಂತೆ ಕನ್ನಡ ಸಾಹಿತ್ಯದ ಶಾಸ್ತ್ರ ವಿಭಾಗದಲ್ಲಿ ಮಹತ್ವದ ವಿದ್ವಾಂಸರಾಗಿದ್ದರು. ಅವರು ಹುಟ್ಟೂರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ. 1920ರ ಫೆಬ್ರುವರಿ 2 ರಂದು ಜನಿಸಿದರು. ಕೃಷಿಕರಾಗಿದ್ದ ತಂದೆ ಗೋವಿಂದ ಭಟ್ಟರು ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲಿಯೂ ಆಸಕ್ತರಾಗಿದ್ದರು. ಅವರ ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಪೆರೋಡಿಯಲ್ಲಿ ಪಡೆದರು. ಹೈಸ್ಕೂಲು ಸೇರಿ ಎಂಟನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಬೇಕಾಯಿತು. ಕಾಸರಗೋಡು ಬೋರ್ಡ್‌ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿ ...

READ MORE

Related Books