ದ್ವೇಷ ಬಿಟ್ಟು ದೇಶ ಕಟ್ಟು

Author : ಬರಗೂರು ರಾಮಚಂದ್ರಪ್ಪ

Pages 32

₹ 25.00




Year of Publication: 2022
Published by: ಜನ ಪ್ರಕಾಶನ

Synopsys

ಬೆಂಗಳೂರಿನಲ್ಲಿ ನಡೆದ ʻಸೌಹಾರ್ದ ಸಂಸ್ಕೃತಿ ಸಮಾವೇಶʼದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾಡಿದ ಆಶಯ ಭಾಷಣವೇ ʻದ್ವೇಶ ಬಿಟ್ಟು ದೇಶ ಕಟ್ಟುʼ ಕೃತಿ. ಮೊದಲ ಮುದ್ರಣದ ನಂತರ ಇದೀಗ ಬಂದ ಮರುಮುದ್ರಣದಲ್ಲಿ ಬರಗೂರು ಅವರು ಮಾಡಿದ್ದ ಭಾಷಣದಲ್ಲಿದ್ದ ಕೆಲವು ಹೊಸ ಅಂಶಗಳು, ಅವುಗಳ ವಿಸ್ತರಣೆಯನ್ನು ಸೇರಿಸಲಾಗಿದೆ. ದೇಶದೆಲ್ಲೆಡೆ ಧರ್ಮದ್ವೇಷ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಸೌಹಾರ್ದ ಹರಡುವ ನಿಟ್ಟಿನಲ್ಲಿ ದೇಶ ಕಟ್ಟುವ ತಮ್ಮ ಆಶಯಗಳನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books