ಜನಪದ ವೈದ್ಯ ಲೇಖನಗಳು

Author : ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

Pages 190

₹ 0.00




Year of Publication: 2020
Published by: ಮಿತ್ರ ಮಾಧ್ಯಮ
Address: ಬೆಂಗಳೂರು

Synopsys

‘ಜನಪದ ವೈದ್ಯ ಲೇಖನಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿನ ಪರಿವಿಡಿಗಳ ಮಾಹಿತಿ; ಲೇಖಕರ ನೆನಪಿನಂಗಳದಿಂದ, ಜನಪದ ಪದ್ಯ (ಒಂದು), ಜನಪದ ವದ್ಯ (ಎರಡು), ಜನಪದ ಪದ್ಯ(ಮೂರು), ಆಯುರ್ವೇದ ಮತ್ತು ಜನಪದ ಪದ್ಯ, ಧೂಮಪಾನ’ ಆರೋಗ್ಯಕ್ಕೆ ಹಾನಿಕರ, ಮಧುಮೇಹ, ಆಮಾಂಶ, ಸ್ವಪ್ನಸ್ಖಲನ ಮತ್ತು ಶೀಘ್ರಸ್ಖಲನ ಚಿಕಿತ್ಸೆ, ರಕ್ತದ ಒತ್ತಡ, ನೆಗಡಿ ಮತ್ತು ಅದರ ಸುಲಭ ಉಪಚಾರ, ಎಲರ್ಜಿ (ರಕ್ತನಂಜು), ಬೆಳ್ಳುಳ್ಳಿ ಯ ಆರೋಗ್ಯದಾಯಕ ಗುಣಗಳು, ಕಣ್ಣುಗಳ ಸಂರಕ್ಷಣೆ, ರೋಗ ಗುಣ ಮಾಡಲು ಹಲವು ಕ್ರಮಗಳಿವೆ, ರೋಗ ಪ್ರತಿಬಂಧ ಕ್ರಮಗಳು, ಜಿಲ್ಲೆಯ ಜನಪದ ವೈದ್ಯರು, ರೋಗ ಪ್ರತಿಬಂಧ ಕ್ರಮಗಳು, ಜಿಲ್ಲೆಯ ಜನಪದ ವೈದ್ಯರು, ಆಯುರ್ವೇದ ವೈದ್ಯ ಶ್ರೀ ಮಹಾದೇವ ಗುಡೇ ಅಂಗಡಿ, . ಕೆಲವು ತುಣುಕು ಮಾಹಿತಿಗಳು, ವಿಷ ಪ್ರಯೋಗ, ಕೋಡ ಖಂಡ ಭಟ್ಟರ ವೈದ್ಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ...

READ MORE

Related Books