ಪಂಚಾನನ

Author : ವೀರೇಶ ಬಡಿಗೇರ

Pages 370

₹ 380.00




Year of Publication: 2021
Published by: ಮಯ ಪ್ರಕಾಶನ
Address: ಅಮಿತ ಬಡಿಗೇರ ಕಮಲಾಪುರ,-583221

Synopsys

ಡಾ. ವೀರೇಶ ಬಡಿಗೇರ ಅವರ ಸಂಪಾದಿತ ಕೃತಿ ’ಪಂಚಾನನ’. ಈ ಕೃತಿಯು ಹೇಳತೇನ ಕೇಳ ಆನ್ ಲೈನ್ ಉಪನ್ಯಾಸ ಸರಣಿಯನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಕೆ. ಆರ್ ಬಡಿಗೇರ ಅವರು, ‘ಕೊರೋನಾ ಸಮಯ ವ್ಯಕ್ತಿಗಳ ಮನ ಕಳವಳಗೊಳಿಸಿತು. ಕುಟುಂಬಗಳ ಶಾಂತಿ ಹಾಳು ಮಾಡಿತು ಹಾಗೂ ಇಡೀ ಸಮಾಜದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅಂತಹ ಸಮಯದಲ್ಲಿ ಇಡೀ ಸಮಾಜಕ್ಕೆ ಚೈತನ್ಯ ತುಂಬುವ ಒಂದು ಹೊಸ ಕಲ್ಪನೆ ಹಂಪಿಯ ಕನ್ನಡ ವಿ.ವಿ. ಪ್ರಾಧ್ಯಾಪಕ  ಡಾ. ವೀರೇಶ ಬಡಿಗೇರ ಅವರಿಗೆ ಮೂಡಿತು. ಅದುವೇ “ ಹೇಳತೇನ ಕೇಳ” ಕಾರ್ಯುಕ್ರಮ. ಕಳೆದ ಒಂದು ವರ್ಷದಿಂದ ಪ್ರತಿ ಭಾನುವಾರ ನಿರಂತರವಾಗಿ ಈ ಉಪನ್ಯಾಸ ಮಾಲೆ ಅಂತರ್ಜಾಲದಲ್ಲಿ ಮೂಡಿಬರುತ್ತಿವೆ. ಉಪನ್ಯಾಸಕ್ಕೆ ಆಯ್ದುಕೊಂಡಿರುವ ವಿಷಯಗಳು ಎಲ್ಲರಿಗೂ ಆಸಕ್ತಿ ಮೂಡಿಸುವಂಥವು. ಶರಣರ ಜೀವನ ಚರಿತ್ರೆ, ವಿಶ್ವಕರ್ಮ ಜನಾಂಗದ ಸಂಸ್ಕೃತಿ, ಸಮಾಜಕ್ಕೆ ಈ ಜನಾಂಗ ನೀಡಿದ ಕೊಡುಗೆ , ಸಂಶೋಧನಾತ್ಮಕ ಮತ್ತು ಸಾಹಿತ್ಯಿಕ ಹಾಗೂ ಸದ್ಯದ ಪರಿಸ್ಥಿತಿಯ ಸಮಸ್ಯೆಗಳು ಸೇರಿದಂತೆ ಹಲವಾರು ವಿಷಯಗಳು ಸರಣಿಯಲ್ಲಿ ಮೂಡಿಬಂದಿವೆ. ಈ ಹೇಳತನ ಹೇಳ ಕಾರ್ಯಕ್ರಮ ಒಂದು ಉತ್ತಮ ಕಾರ್ಯವಾಗಿದ್ದು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ. ಆದುದರಿಂದ ಇದು ಕೊರೊನಾ ನಂತರವು ನಿರಂತರವಾಗಿ ನಡೆಯಬೇಕೆಂಬ ಆಶಯವಿದೆ. ಇಂತಹ ಉಪಯುಕ್ತ ವಿಚಾರ ಹಂದರವನ್ನು ಸಮಾಜ ಬಂಧುಗಳು ಬೆಂಬಲಿಸಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books