ಮಾತು ಮಂಥನ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 116

₹ 90.00




Year of Publication: 2004
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವಯ್ಯಾಲಿಕಾವಲ್, ಬೆಂಗಳೂರು-560003
Phone: 08023313400

Synopsys

‘ಮಾತು ಮಂಥನ’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಭಾಷಣ-ಬರಹಗಳ ಸಂಕಲನ. ಈ ಕೃತಿಗೆ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಬೆನ್ನುಡಿ ಬರೆದಿದ್ದಾರೆ. ಮೂಡ್ನಾಕೂಡು ಚಿನ್ನಸ್ವಾಮಿ ಸೂಕ್ಷ್ಮ ಪ್ರತಿಭೆಯ ಕವಿ. ಕವಿತೆಯ ಮೂಲಕವೇ ತನನ್ನು ಗುರುತಿಸಿಕೊಳ್ಳುವಂತೆ ಕವಿಯಾಗಿ ಬೆಳೆದ ಇವರು ಕತೆಗಳನ್ನು ಬರೆದುದುಂಟು. ಇಲ್ಲಿಯ ಲೇಖನಗಳು ಸಾಮಾಜಿಕ ಸಾಂದರ್ಭಿಕ ವಿನ್ಯಾಸದಲ್ಲಿಯೇ ಮೈಪಡೆದಿವೆ ಎನ್ನುತ್ತಾರೆ ಮಲ್ಲೇಪುರಂ. ಹಾಗೇ ಸಮಕಾಲೀನ ಸಾಹಿತ್ಯ, ಸಂಸ್ಕೃತಿ, ಸಮಾಜ, ಭಾಷೆ, ಜಾತಿ ವ್ಯವಸ್ಥೆ, ಇತಿಹಾಸ ಮುಂತಾದ ವಿಷಯಗಳನ್ನು ಕೇವಲ ಮಾತುಗಳನ್ನಾಗಿಸದೆ ಅವುಗಳನ್ನು ಮಂಥನಗಳಾಗಿ ರೂಪುಗೊಳಿಸಿರುವುದು ಗಮನಿಸತಕ್ಕ ಅಂಶ. ಮಂಥನವೆಂದರೆ ಕಡೆಯುವುದೆಂದೇ ಅರ್ಥ. ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ ಇಲ್ಲಿ ಮಾತೆಂಬ ಮೊಸರನ್ನು ಕಡೆದು ವಿಚಾರಗಳೆಂಬ ಬೆಣ್ಣೆಯನ್ನು ತೆಗೆದಿರುವುದು ನಾವು ಗಮನಿಸಬೇಕಾದ ಸಂಗತಿ. ಅಲ್ಲಮನು ಮಾತೆಂಬುದೇ ಜ್ಯೋತಿರ್ಲಿಂಗವೆಂದು ಹೇಳುತ್ತಾನೆ. ಇಲ್ಲಿಯ ಲೇಖನಗಳು ವೈಚಾರಿಕ ಬೆಳಕಿನ ಕಿರಣಗಳಾಗಿ ಪರಿಣಮಿಸಿರುವುದು ವಿಶೇಷ ಎಂದು ಮಲ್ಲೇಪುರಂ ಜಿ. ವೆಂಕಟೇಶ ಅವರು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books