ಮಹಾತ್ಮರ ಮರಣ ಮತ್ತು ಇತರ ಉಪನ್ಯಾಸಗಳು

Author : ಜಿ.ಪಿ. ರಾಜರತ್ನಂ

Pages 108

₹ 1.00




Year of Publication: 1948
Published by: ಹಿಂದ್ ಕಿತಾಬ್ಸ್ ಲಿಮಿಟೆಡ್
Address: # 11, ಜವಾಹರ ಲಾಲ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-3

Synopsys

ಭಾರತಕ್ಕೆ ಸ್ವಾತಂತ್ಯ್ರ ಬಂದಿದ್ದು ಹಾಗೂ ಗಾಂಧೀಜಿಯನ್ನುಹತ್ಯೆ ಮಾಡಿದ್ದು ಈ ಎರಡು ಸಂದರ್ಭಗಳು ದೇಶದಲ್ಲಿ ಬಹುಚರ್ಚಿತ ಸಂಗತಿಗಳಾಗಿದ್ದರಿಂದ ತಮಗೆ ಸಭೆ-ಸಮಾರಂಭಗಳಲ್ಲಿ ಮಾತನಾಡಲು ಮಹನೀಯರು ಆಹ್ವಾನಿಸಿದ ಮೇರೆಗೆ ಅಲ್ಲಲ್ಲಿ ಭಾಷಣಗಳನ್ನು ಮಾಡಿದ್ದು, ಅವುಗಳ ಸಂಗ್ರಹವೇ ‘ಮಹಾತ್ಮರ ಮರಣ ಮತ್ತು ಇತರ ಉಪನ್ಯಾಸಗಳು’ ಎಂದು ಲೇಖಕ ಜೆ.ಪಿ.ರಾಜರತ್ನಂ ಅವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಮಹಾತ್ಮರ ಮರಣ, ಜನತಾ ರಾಜ್ಯದ ಭಾರ, ಖಾದೀ ಕಾಷಾಯ, ಹಿಂದೆ ಉರುಳಿದ ಚಕ್ರ ಹೀಗೆ ಒಟ್ಟು 14 ಉಪನ್ಯಾಸಗಳನ್ನು ಇಲ್ಲಿ ಸಂಕಲಿಸಲಾಗಿದೆ. ಈ ಪೈಕಿ ಬಹುತೇಕ ಭಾಷಣಗಳು ಜೀವನ, ಪ್ರಜಾಮತ, ವಿಶ್ವಕರ್ಣಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books