ಲವ-ಕುಶ

Author : ತ.ಸು. ಶಾಮರಾಯ

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಲವ-ಕುಶ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕ ತ.ಸು. ಶಾಮರಾಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಲವ-ಕುಶರ ಕುರಿತಾಗಿ ಶ್ರೀರಾಮ-ಸೀತೆಯರ ಮಕ್ಕಳು. ಗರ್ಭಿಣಿಯಾದ ಸೀತಾದೇವಿಯನ್ನು ಶ್ರೀರಾಮನು ಕಾಡಿಗೆ ಕಳುಹಿಸಿದ. ಅನಂತರ ವಾಲ್ಮೀಕಿಯ ಆಶ್ರಮದಲ್ಲಿ ಹುಟ್ಟಿದರು. ಶ್ರೀರಾಮನ ಯಾಗದ ಕುದುರೆಯನ್ನು ಕಟ್ಟಿ ಹಾಕಿ ಲಕ್ಷ್ಮಣ, ಭರತ, ಶತ್ರುಘ್ನರನ್ನೆ ಅಲ್ಲದೆ ಶ್ರೀರಾಮನನ್ನೂ ಸೋಲಿಸಿದ ಬಾಲವೀರರು. ವಾಲ್ಮೀಕಿ ಋಷಿಗಳು ಹೇಳಿಕೊಟ್ಟ ರಾಮಾಯಣದ ಕಥೆಯನ್ನು ಶ್ರೀರಾಮನ ಮುಂದೆ ಹಾಡಿದರು ಎಂದು ಸುಂದರವಾಗಿ ಲೇಖಕರು ಕಥೆಯನ್ನು ಕೊಂಡೊಯ್ಯುತ್ತಾರೆ. ಲವ-ಕುಶರು ಶ್ರೇಷ್ಟ ಪುರುಷ ರಾಮನ ಮಕ್ಕಳಾದರೂ ಅವರಿಗೂ ಕಷ್ಟ ಕಾರ್ಪಣ್ಯಗಳು ತಪ್ಪಲಿಲ್ಲ. ಅದರೆ ವೀರಪುರುಷರಾಗಿ ಬೆಳೆದ ಸಹೋದರರು ತಮ್ಮ ತಂದೆಯ ಯಾರೆಂದು ತಿಳಿಯದೆ ಅವರ ವಿರುದ್ದವೇ ಹೋರಾಟಕ್ಕೆ ನಿಂತಾಗ ಎದುರಾಗುವ ಸನ್ನಿವೇಶಗಳನ್ನು ಈ ಕೃತಿಯಲ್ಲಿ ಶಾಮರಾಯರು ಸರಳ ಭಾಷೆಯಲ್ಲಿ ಚಿತ್ರಿಸಿದ್ದಾರೆ.

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books