ಶ್ರೀ ಗೌರಿಶಂಕರ ಸ್ವಾಮಿಗಳವರ ಸಮಗ್ರ ಸಾಹಿತ್ಯ

Author : ಮಲೆಯೂರು ಗುರುಸ್ವಾಮಿ

Pages 740

₹ 500.00




Year of Publication: 2014
Published by: ಜೆ ಎಸ್ ಎಸ್ ಗ್ರಂಥಮಾಲೆ
Address: ಜೆ.ಎಸ್.ಎಸ್. ಮಹಾವಿದ್ಯಾಪೀಠ, ಮೈಸೂರು-570004

Synopsys

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಶ್ರೀ ಪಂಚಗವಿ ಮಠದ (ಗೌರಿಶಂಕರ ನಗರ) ಶ್ರೀ ಗೌರಿ ಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯವನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು. ಪ್ರೊ. ಮಲೆಯೂರು ಗುರುಸ್ವಾಮಿ -ಪ್ರಧಾನ ಸಂಪಾದಕರು, ನಂದೀಶ ಹಂಚೆ -ಸಂಪಾದಕರು. ಮೈಸೂರು ರಾಜಮನೆತನದ ಅರಸು ಒಬ್ಬರಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತು. ಚಾಮುಂಡಿ ತಪ್ಪಿಲಿನಲ್ಲಿದ್ದ ಗವಿಯೊಂದರಲ್ಲಿ ಯೋಗಾನುಷ್ಠಾನದಲ್ಲಿದ್ದ ಶಿವಬಸವ ಸ್ವಾಮಿಗಳು ಆ ಕಾಯಿಲೆಯನ್ನು ಗುಣಪಡಿಸಿದ್ದರಿಂದ, ಸ್ವಾಮಿಗಳಿದ್ದ ಗವಿಯ ಸುತ್ತಲಿನ ಐದೂ ಗವಿಗಳನ್ನು ಅಭಿವೃದ್ಧಿಪಡಿಸಿದರು. ಅಂದಿನಿಂದ ಅರಮನೆ ಶ್ರೀ ಪಂಚಗವಿ ಮಠ ಎಂದೇ ಈ ಸ್ಥಳ ಪ್ರಸಿದ್ಧಿಗೆ ಬಂದಿತು. ಮಠದ ಪರಂಪರೆಯಾಗಿ ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಗೌರಿಶಂಕರ ಸ್ವಾಮಿಗಳ (ಮೊದಲಿನ ಹೆಸರು ಶಂಕರ) ಪಟ್ನೇಟಾಧಿಕಾರದ ನಂತರ ಮಠವು ಕಂಡ ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಸೇವೆಗಳ ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಶಿವರಾತ್ರೀಶ್ವರ ನವರತ್ನ ಮಾಲಿಕಾ, ಶಿವರಾತ್ರೀಶ್ವರ ರಾಷ್ಟ್ರಕಂ, ಅಕ್ಕಮಾದೇವಿ. ಬಸವಾನಂದ ಲಹರಿ, ಭಾಷಣಗಳು ಹಾಗೂ ಅನುಬಂಧಗಳು ಹೀಗೆ ಕೃತಿಯ ಒಟ್ಟು ಚೌಕಟ್ಟು ಇಲ್ಲಿ ಕಾಣಸಿಗುತ್ತದೆ.

About the Author

ಮಲೆಯೂರು ಗುರುಸ್ವಾಮಿ
(01 August 1947)

ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು 1947ರ ಆಗಸ್ಟ್ 1ರಂದು ಜನಿಸಿದರು. ತಂದೆ ಶಿವಣ್ಣ, ತಾಯಿ ಮರೆಮ್ಮ. ಪ್ರಸ್ತುತ ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸ. ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಗುರುಸ್ವಾಮಿ ಅವರ ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.  ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ...

READ MORE

Related Books