ಸಮಗ್ರ ದಾಸ ಸಾಹಿತ್ಯ ಸಂಪುಟ: 21-ಭಾಗ 2

Author : ಶ್ರೀನಿವಾಸ ಹಾವನೂರ

Pages 810

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು- 560002

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ: 21-ಭಾಗ 2’ ಇಂದಿರೇಶರು ಹಾಗೂ ಧಾರವಾಡ ಪ್ರದೇಶದ ಇತರ ಹರಿದಾಸರ ಕೀರ್ತನೆಗಳು ಕೃತಿಯನ್ನು ಡಾ. ಶ್ರೀನಿವಾಸ ಹಾವನೂರ ಹಾಗೂ ನಳಿನಿ ವೆಂಕಟೇಶ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ,ಕೀರ್ತನೆಗಳು ಸೇರಿದಂತೆ ಇಂದಿರೇಶರು(ಪಾಂಡುರಂಗಿ ಹುಚ್ಚಾಚಾರ್ಯರು), ಗುರು ಇಂದಿರೇಶರು, ಗೋಪತಿವಿಠವರು, ರಮಾಪತಿವಿಠಲರು, ಸಿರಿಗೋವಿಂಠಲರು, ರಾಜಗೋಪಾಲದಾಸರು, ತಂದೆ ವರದಗೋಪಾಲವಿಠಲರು, ಗುರುತಂದೆ ವರದಗೋಪಾಲವಿಠಲರು, ಸಿರಿಗುರುತಂದೆವರದಗೋಪಾಲವಿಠಲರು, ತಂದೆವರದವಿಠಲ, ತಂದೆ ಶ್ರೀ ನರಹರಿ, ಐಹೊಳೆವೆಂಕಟೇಶರು, ಸಿರಿವಿಠಲರು, ಗದುಗಿನ ವೀರನಾರಾಯಣರು(ಹುಯಿಲಗೋಳ ನಾರಾಯಣರಾಯರು), ದೀರ್ಘಕೃತಿಗಳು- ಲಕ್ಷ್ಮೀಲೀಲಾಮೃತಸಾರ-ಇಂದಿರೇಶ, ಗುರುಕಥಾಮೃತಸಾರ-ಗುರು ಇಂದಿರೇಶ, ಕೀಚಕವಧವು-ರಾಜಗೋಪಾಲವಿಠಲ, ಶ್ರೀರಾಮ ಪಾರಿಜಾತ- ಪ್ರಹೊಳೆವೆಂಕಟೇಶ, ಅಖಿಲಾಂಡಕೋಟಿಬ್ರಹ್ಮಾಂಡನಾಯಕ- ಸಿರಿ ವಿಠಲ. ಪ್ರಹ್ಲಾದಚರಿತ್ರೆ-ಸಿರಿವಿಠಲ, ಶ್ರೀನಾರಾಯಣ ಪಂಜರವು-ಸಿರಿವಿಠಲ ಸಂಕಲನಗೊಂಡಿದ್ದು, ಅನುಬಂಧದಲ್ಲಿ ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಕೀರ್ತನಗೆಳ ಆಕಾರಾಧಿಸೂಚಿ ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books