ಸಣ್ಣಕಥೆಗಳ ಸಂಕಲನ

Author : ಗಿರಡ್ಡಿ ಗೋವಿಂದರಾಜ

₹ 5.00




Year of Publication: 1983
Published by: ವಿಶ್ವಕನ್ನಡ ಸಮ್ಮೇಳನ

Synopsys

ಗಿರಡ್ಡಿ ಗೋವಿಂದರಾಜು ಸಂಪಾದಿತ ಕೃತಿ ‘ಸಣ್ಣಕಥೆಗಳ ಸಂಕಲನ’. ಈ ಸಣ್ಣ ಕಥೆಗಳ ಸಂಕಲನದಲ್ಲಿ ಒಟ್ಟು 32 ಕಥೆಗಳಿವೆ. ವೆಂಕಟಿಗನ ಹೆಂಡತಿ - ಶ್ರೀನಿವಾಸರ ಕಥೆ, ಜೋಗತಿಕಲ್ಲು -ಆನಂದಕಂದರ ಕತೆ, ಮೋಚಿ -ಭಾರತೀಪ್ರಿಯ, ಅನ್ನದ ಕೂಗು -ಅ.ನ.ಕೃ, ದನಿಯರ ಸತ್ಯನಾರಾಯಣ - ಕೊರಡ್ಕಲ್ ಸತ್ಯನಾರಾಯಣ, ಕತೆಯಾದಳು ಹುಡುಗಿ -ಯಶವಂತ ಚಿತ್ತಾಲ, ತಬರನ ಕತೆ - ಪೂರ್ಣಚಂದ್ರ ತೇಜಸ್ವಿ, ಗಾಂಧಿ -ಬೇಸರ ಬೆಸಗರಹಳ್ಳಿ ರಾಮಣ್ಣ, ಮಲ್ಲೇಶಿಯ ನಲ್ಲೆಯರು -ಕೆರೂರು ವಾಸುದೇವಾಚಾರ್ಯ, ರಾಧೆಯ ಕ್ಷಮೆ- ಆನಂದ, ಗುಬ್ಬಿಗಳ ಸಂಸಾರ- ಕೃಷ್ಣಕುಮಾರ ಕಲ್ಲೂರ , ಕೋರ್ಟಿನಲ್ಲಿ ಗೆದ್ದ ಎತ್ತು- ಗೊರೂರು ರಾಮಸ್ವಾಮಿ ಅಯ್ಯಂಗಾರ್, ದಾಸರಯ್ಯನ ಪಟ್ಟ -ಕೋಚನ್ನಬಸಪ್ಪ, ಸೆರಗಿನ ಕೆಂಡ- ಬಿ.ಸಿ.ರಾಮಚಂದ್ರಶರ್ಮ, ಕ್ಷಿತಿಜ -ಶಾಂತಿನಾಥ ದೇಸಾಯಿ, ಬಿಡುಗಡೆ- ವ್ಯಾಸರಾಯ ಬಲ್ಲಾಳ, ಶ್ರಾದ್ಧ -ಜಿ.ಟಿ.ರಾಘವ, ಹಾವು- ಕೆ.ಸದಾಶಿವ, ಅಲ್ಲಾವುದ್ದೀನನ ಅದ್ಭುತ ದೀಪ- ರಾಘವೇಂದ್ರ ಖಾಸನೀಸ, ನವಿಲುಗಳು- ಯು.ಆರ್.ಅನಂತಮೂರ್ತಿ , ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ- ಕುಂವೀರಭದ್ರಪ್ಪ, ಅಲೆಗಳು -ಕಾಳೇಗೌಡ ನಾಗವಾರ, ಹಂಚಿಕೆ -ಸುಮತೀಂದ್ರ ನಾಡಿಗ, ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ- ಈಶ್ವರ ಚಂದ್ರ, ಕಾಡಜ್ಜ - ರಾಘವೇಂದ್ರ ಪಾಟೀಲ, ನಮ್ಮೂರಲ್ಲೊಬ್ಬ ತಲಾಟಿ -ಗಿರಡ್ಡಿ ಗೋವಿಂದರಾಜ, ಕ್ರೌರ್ಯ -ಎಸ್.ದಿವಾಕರ, ದಂಗೆಯ ಪ್ರಕರಣ- ರಾಮಚಂದ್ರದೇವ,ಮೀಸೆಯವರು -ಜಿ.ಎಸ್.ಸದಾಶಿವ ,ಎರಡು ತೆಂಗಿನುದ್ದ ಮರದ ಮನುಷ್ಯರು- ಎಂ.ಎಸ್.ಕೆ.ಪ್ರಭು

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Related Books