ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-5

Author : ವಿಷ್ಣು ನಾಯ್ಕ

Pages 504

₹ 150.00




Year of Publication: 1996
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-5’ ವಿಚಾರ-ವಿಮರ್ಶೆ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮೂರು ಭಾಗಗಳಲ್ಲಿ ಗೌರೀಶ ಕಾಯ್ಕಿಣಿ ಅವರ ವಿಚಾರ-ವಿಮರ್ಶೆಗಳು ಸಂಕಲನಗೊಂಡಿದ್ದು ಭಾಗ 1ರಲ್ಲಿ ಕಾವ್ಯವೆಂದರೇನು, ಹೊಸ ಕಾವ್ಯದ ಹಾದಿ, ರಸನಿಷ್ಪತ್ತಿ-ಒಂದು ವಿಶ್ಲೇಷಣೆ, ವಿಮರ್ಶೆಯ ಬಗೆಗೆ ಒಂದು ವಿಮರ್ಶೆ, ವಿಮರ್ಶೆಯಲ್ಲಿ ನವ್ಯತೆ, ವಿಮರ್ಶೆಗೆ ಯಾವ ದಾರಿ, ಅನುಭವ ಮತ್ತು ಅಭಿವ್ಯಕ್ತಿ, ಪರಕೀಯ(ಅನಾಥ) ಪ್ರಜ್ಞೆ, ಅಥೆಂಟಿಕ್ ಮತ್ತು ಜೆನ್ವಿನ್ , ಸಾಹಿತ್ಯದಲ್ಲಿ ಶೂದ್ರ-ಬ್ರಾಹ್ಮಣ ಸಂದರ್ಭ, ಎಡ ಯಾವುದು, ಬಲ ಯಾವುದು, ಕಾವ್ಯದಲ್ಲಿ ದಲಿತ ಪ್ರಜ್ಞೆ ಎಂಬ ಲೇಖನಗಳು ಸಂಕಲನಗೊಂಡಿವೆ. ಭಾಗ-2ರಲ್ಲಿ ಸುಬ್ಬಣ್ಣನ ಬಗೆಗೆ ಪುನರ್ವಿಚಾರ, ಗೀತ ನಾಟಕಗಳು, ಕಡಲು ಮತ್ತು ಮುಗಿಲು, ರಸಿಕರಂಗರ ಭಾವಗೀತಗಳು, ಕಡೆಂಗೋಡ್ಲು ಮತ್ತು ಆಲಿವರ್ ಗೋಲ್ಡ್ ಸ್ಮಿಥ್, ರಸಾರ್ದ್ರ ವಿಮರ್ಶಕ, ಭೈರಪ್ಪನವರ ಕಾದಂಬರಿಗಳ್ಳಿ ಧರ್ಮ ಲೇಖನಗಳು ಸಂಕಲನಗೊಂಡಿವೆ. ಭಾಗ-3ರಲ್ಲಿ ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ, ಡಾ. ಶಂ.ಬಾ. ಜೋಶಿಯವರ ಸಾಮಾಜಿಕ ತತ್ವವಿಚಾರಗಳು ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books