ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 3

Author : ವಿಷ್ಣು ನಾಯ್ಕ

Pages 462

₹ 125.00




Year of Publication: 1994
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 3’ ಪಾಶ್ಚಾತ್ಯ ಪ್ರತಿಭೆ ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮೊದಲ ಮಾತು, ಪ್ರಸ್ತಾವನೆ ಜೊತೆಗೆ ಪಶ್ಚಿಮದ ಪ್ರತಿಭೆ ಶೀರ್ಷಿಕೆಯಡಿಯಲ್ಲಿ ತತ್ವ ಪ್ರತಿಭೆ, ಕಲಾ ಪ್ರತಿಭೆ, ಗಾನ ಪ್ರತಿಭೆ, ಕ್ರಾಂತಿ ಪ್ರತಿಭೆ, ಕಾವ್ಯ ಪ್ರತಿಭೆ ಲೇಖನಗಳು ಸಂಕಲನಗೊಂಡಿವೆ ಸತ್ಯಾರ್ಥಿ ಶೀರ್ಷಿಕೆಯಡಿಯಲ್ಲಿ ವಿಜ್ಞಾನದ ಪ್ರತಿಭೆ, ಸಾಹಸ ಪ್ರತಿಭೆ, ರಾಜಕೀಯ ಪ್ರತಿಭೆ, ನವ್ಯದ ನಾಲ್ಕು ನಾಯಕರು ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books