ಗುರುದತ್ತ ಚರಿತ್ರೆ

Author : ಎಂ.ಪಿ. ಮಂಜಪ್ಪ ಶೆಟ್ಟಿ

Pages 106

₹ 149.00




Year of Publication: 1985
Published by: ಕನ್ನಡ ಅಧ್ಯಯನ ಸಂಸ್ಥೆ
Address: ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರ್ಗಿ

Synopsys

'ಗುರುದತ್ತ ಚರಿತ್ರೆ' ಕೃತಿಯು ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪಾದಕತ್ವದ ಕೃತಿಯಾಗಿದೆ. 'ಗುರುದತ್ತ ಚರಿತ್ರೆ'ಯ ಕರ್ತೃವಿನ ಹೆಸರೇನೆಂಬುದು ತಿಳಿದುಬರುವುದಿಲ್ಲ. ಕವಿ ಚರಿತ್ರೆಕಾರರೇನೋ ಇದರ ಕರ್ತೃ ದೇವರಸ ಎಂದು ಹೇಳಿದ್ದಾರೆ. ಆದರೆ ವಾಸ್ತವ ವಾಗಿ ದೇವರಸನು ಈ ಕಾವ್ಯದ ಕರ್ತೃವಲ್ಲ, ಅವನು ಪ್ರಸ್ತುತ ಕಾವ್ಯಕರ್ತೃವಿನ ತಂದೆ. ಕವಿಚರಿತ್ರೆಕಾರರು ಹಾಗೇಕೆ ಗ್ರಹಿಸಿದರೋ ಗೊತ್ತಾಗುವುದಿಲ್ಲ.

ಕವಿ ತನ್ನ ಹೆಸರನ್ನು ಹೇಳಿಕೊಳ್ಳದೆ, ತಾನು ದೇವರಸನೆಂಬವನ ಮಗನೆಂಬುದನ್ನು ತನ್ನ ಕಾವ್ಯದಲ್ಲಿ ಸ್ಪಷ್ಟ ವಾಗಿಯೇ ಹೇಳಿದ್ದಾನೆ. ಅವನು ತನ್ನ ತಂದೆ ಮತ್ತು ಸ್ಥಳದ ಬಗ್ಗೆ ಹೇಳುತ್ತಾ: ಶ್ರೀಕಾಮಿನಿಗೆ ನೆಲೆವನೆಯೆಂದೆನಿಪ ಮ 1 ಹಾ ಕರ್ನಾಟಕದೇಶದೊಳಗೆ ತಾ ರಕವೆಸೆವುದು ಪುರವೊಂದು ಭೂಗತ | ಟಾಕವೇಸರನರ ಹಡೆದು ಆ ಪುರವರದ ಸನ್ನಿಧಿಯೊಳಗೊಂದು ಮ | ಹಾ ಪೃಥ್ವಿಧರವಿಹುದು ಆ ಪರ್ವತಾಗ್ರದಿ ಜಿನಗೃಹವೊಂದು ನಾ | ನಾ ಪರಿಯಿಂದೊಪ್ಪುತಿಹುದು ಆ ಸರ್ವ ರಂಜನೆಯಾಂತ ಜಿನೇಂದ್ರ | ವಾಸದೊಳಗೆ ಸೊಗಯಿಸುವ ಆ ಸನ್ನಿಧಿಪೀಠದ ಮೇಲೆ ಒಪ್ಪಿಹ | ನಾ ಸುಪಾರಿಶ್ವಜಿನೇಂದ್ರ ಹೀಗೆ ಕೃತಿಯು ಗುರುದತ್ತ ಚರಿತ್ರೆಯ ಕುರಿತು ವಿಸ್ತಾರವಾಗಿ ಮಾತನಾಡುತ್ತದೆ.

About the Author

ಎಂ.ಪಿ. ಮಂಜಪ್ಪ ಶೆಟ್ಟಿ

ಎಂ.ಪಿ.ಮಂಜಪ್ಪ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಮಸಗಲಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿಯನ್ನು ಮಾಡಿರುವ ಅವರು ವ್ಯಕ್ತಿಚಿತ್ರಗಳನ್ನು ರಚಿಸಿರುತ್ತಾರೆ. ಕೃತಿಗಳು: ನನ್ನಯ್ಯ ಚಾರಿತ್ರ, ಗುರುದತ್ತ ಚರಿತ್ರೆ, ಕೃಷ್ಣರಾಜ ವಿಲಾಸ, ಕಾವೇರಿ ಮಹಾತ್ಮೆ, ಚೆಲುವಾಂಬೆಯ ಕೃತಿಗಳು, ...

READ MORE

Related Books