ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು

Author : ವಿಷ್ಣು ನಾಯ್ಕ

Pages 464

₹ 125.00




Year of Publication: 1993
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು’ ವಿಚಾರ ಸಾಹಿತ್ಯ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಯಶವಂತ ಚಿತ್ತಾಲರ ಪ್ರಸ್ತಾವನೆ ಇದೆ. ಕೃತಿಯ ಕುರಿತು ಬರೆಯುತ್ತಾ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಿದು. ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನದವರು ಈ ಕುರಿತು ರೂಪಿಸಿಕೊಂಡ ಒಂದು ಬೃಹತ್ ಯೋಜನೆ ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತವಾಗಿದೆಯೆನ್ನುವ ಶುಭ ಸಮಾಚಾರ ಹೊತ್ತು ಹೊರಬಂದಿದೆ. ಇದರಲ್ಲ ಈ ಯೋಜನೆಗೆ ಪ್ರಸ್ತಾವನೆಯಾಗಬಲ್ಲ ನನ್ನ ಕೆಲವು ಮಾತುಗಳು ಇರಬೇಕು ಎಂದು ಯೋಜನೆಯ ಸಂಚಾಲನ-ಶಕ್ತಿಯಾದ ತರುಣ ಮಿತ್ರ ವಿಷ್ಣು ನಾಯ್ಕರ ಬಯಸಿದ್ದಾರೆ. ನಾನು ತುಂಬಾ ಖುಷಿಯಿಂದ, ಹೆಮ್ಮೆಯಿಂದ ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಗೌರೀಶ- ಸಾಹಿತ್ಯದ ಬಹುಮುಖ್ಯ ಸಾಧನೆ ವೈಚಾರಿಕ ಕ್ಷೇತ್ರಕ್ಕೆ ಸೇರಿದ್ದೆನ್ನಬೇಕು. ಗೌರೀಶರು ನಮಗೆ ಮುಖ್ಯರಾಗುವುದು, ಪ್ರಿಯರಾಗುವುದು ಒಬ್ಬ ಶ್ರೇಷ್ಠ ವಿಚಾರವಾದಿಯಾಗಿ, ವಿಶ್ವವನ್ನು, ಬದುಕನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎನ್ನುವುದರಲ್ಲಿ ಎಲ್ಲ ವಿಚಾರವಾದಿಗಳಿಗೆ ದೃಢವಾದ ನಂಬಿಕೆಯಿದೆ ಎಂದಿದ್ದಾರೆ. ಈ ಕೃತಿಯಲ್ಲಿ ವಿಷ್ಣು ನಾಯ್ಕ ಅವರು ಬರೆದಿರುವ ಮೊದಲ ಮಾತು, ಯಶವಂತ ಚಿತ್ತಾಲರ ಪ್ರಸ್ತಾವನೆ ಜೊತೆಗೆ ವಿಚಾರವಾದ, ವಿಚಾರವಾದ ಮತ್ತು ನಿರಾಶಾವಾದ, ವಿಚಾರವಾದ-ಉತ್ತರಾರ್ಧ, ಮಾರ್ಕ್ಸ್ ವಾದ, ನವ ಮಾನವತಾವಾದ ಹಾಗೂ ನಾಸ್ತಿಕನು ಮತ್ತು ದೇವರು ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books