ತ್ರಿವೇಣಿಗೆ ಮಿಡಿದ ಶಂಕರ್

Author : ಕಗ್ಗೆರೆ ಪ್ರಕಾಶ್

Pages 336

₹ 200.00




Year of Publication: 2007
Published by: ದಾಮಿನಿ ಸಾಹಿತ್ಯ

Synopsys

ಲೇಖಕ ಕಗ್ಗೆರೆ ಪ್ರಕಾಶ್ ಹೊರತಂದಿರುವ ಕೃತಿ ತ್ರಿವೇಣಿಗೆ ಮಿಡಿದ ಶಂಕರ್. ಈ ಸಂಕಲನದಲ್ಲಿ ತ್ರಿವೇಣಿಯವರ ಕೆಲವು ಕಾದಂಬರಿಗಳನ್ನು ನಾಟಕ ರೂಪಾಂತರ ಮಾಡಲಾಗಿದೆ. ತ್ರಿವೇಣಿಯವರು ತೀರಿಕೊಂಡಾಗ ಬಂದ ಅಭಿಮಾನಿಗಳ ಪತ್ರಗಳಲ್ಲಿ ಕೆಲವನ್ನು ಪ್ರಕಟಿಸಲಾಗಿದೆ.ಕೃತಿಯ ಪರಿವಿಡಿಯಲ್ಲಿ ಮೊದಲ ಹೆಜ್ಜೆ, ಸೋತು ಗೆದ್ದವಳು, ದೂರದ ಬೆಟ್ಟ, ಬಾನು ಬೆಳಗಿತು, ಜೊತೆಗೆ ತ್ರಿವೇಣಿಗೆ ಮಿಡಿದಹೃದಯಗಳು ಎಂಬ ಶೀರ್ಷಿಕೆಗಳಿವೆ.

About the Author

ಕಗ್ಗೆರೆ ಪ್ರಕಾಶ್
(01 June 1971)

ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. ನಾಡಿನ ವಿವಿಧ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ವಾಸವಿದ್ದು,  ವೆಸ್ತಾಕ್ರಾಫ್ಟ್ ಕ್ರಿಯೇಟಿವ್ ವರ್ಲ್ಡ್ ಕಂಪನಿಯ ಸೇವೆಯಲ್ಲಿದ್ದಾರೆ.  ಕೃತಿಗಳು: ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ (ಕಾವ್ಯಗಳು). ಅನಂತ (ಸಾಹಿತ್ಯ ಸಂಚಿಕೆಯ ಸಂಪಾದನೆ). ಬಿಡುಗಡೆ (ಬಹುಮಾನಿತ ಬರಹಗಳ ಸಂಪಾದನೆ). ಅವಳ ಮಧುರ ಅಮರ ಪತ್ರಗಳು (ಸಂಪಾದನೆ). ಭೂಮಿಕೆ (ಸಾಹಿತ್ಯ  ಸಂಚಿಕೆಯ ಸಂಪಾದನೆ). ಮಾತುಕತೆ- ...

READ MORE

Related Books