ಶಿಕ್ಷಕರು, ವಿದ್ವಾಂಸರು, ಪ್ರವಚನಕಾರರು, ಕೀರ್ತನಾಕಾರರು, ಸಂಶೋಧಕರು ಹೀಗೆ ಬಹುಮುಖೀಯ ವ್ಯಕ್ತಿತ್ವದ ಪಂಡಿತ ಚನ್ನಪ್ಪ ಎರೇಸೀಮೆ ಅವರ ಶೈಕ್ಷಣಿಕ-ಸಾಮಾಜಿಕ, ಸಾಹಿತ್ಯಕ ಕೊಡುಗೆಗಳನ್ನು ಗೌರವಿಸಲು ಪಂಡಿತ ಚನ್ನಪ್ಪ ಎರೇಸೀಮೆ ಅಭಿನಂದನಾ ಸಮಿತಿಯು ಪ್ರಕಟಿಸಿದ್ದ ಕೃತಿಯೇ-ನನ್ನ ಕಥೆ. ಬಾಳಸಂಧ್ಯೆಯಲ್ಲಿ,ನಾನು ಸಾಗಿ ಬಂದ ದಾರಿಯನ್ನೊಮ್ಮೆ ತಿರುಗಿ ನೋಡಿದಾಗ ಕಂಡ ನೆನಪಿನ ದಿಬ್ಬಣಗಳ ಸಾಲು-ನನ್ನ ಕಥೆ ಎಂದು ಪಂಡಿತ ಚನ್ನಪ್ಪ ಎರೇಸೀಮೆ ಅವರು ಹೇಳಿಕೊಂಡಿದ್ದಾರೆ. ತಮ್ಮ ಪೂರ್ವಜರು, ಹಳ್ಳಿಯ ಪರಿಸರ, ಶಾಲೆ, ಓದು, ಸರ್ಕಾರಿ ಸೇವೆ, ಸಿದ್ಧಗಂಗಾ ಮಠದ ಪರಿಸರ,ಪ್ರಭಾವ ಬೀರಿದ ಸಾಹಿತ್ಯಕ ಅಂಶಗಳು, ವಚನ-ವೀರಶೈವ ಸಂಸ್ಕೃತಿ ಹೀಗೆ ಎಲ್ಲವನ್ನೂ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.
©2022 Book Brahma Private Limited.