ಮನಸೇ ನನ್ನ ಮನಸೇ...

Author : ಬಿ.ಆರ್. ಲಕ್ಷ್ಮಣರಾವ್

Pages 131

₹ 125.00




Year of Publication: 2023
Published by: ಸಪ್ನ ಬುಕ್ ಹೌಸ್

Synopsys

ಕವಿಯ ಜೀವನಾನುಭವ ಮಥನ ಮಾಡಿರುವ ಕೃತಿ ಕವಿ ಬಿ.ಆರ್. ಲಕ್ಷಣರಾವ್ ಅವರ ‘ತುಂಟ’. ಬರಿಯ ಅನುಭವವಲ್ಲ, ಅನುಭಾವದ ಛಾಯೆಯೂ ಅಲ್ಲಿ ಕಾಣಿಸಿದೆ ಎನ್ನುವ ಕವಿ, ಭವಿಷ್ಯ ಪೂರ್ವನಿಶ್ಚಿತವಾದದ್ದು ಎಂಬ ಚಿಂತನೆಯನ್ನು ಮೇಲಿನ ಸಾಲುಗಳ ಮೂಲಕ ಚರ್ಚೆಗೆ ಒಳಪಡಿಸಿದ್ದಾರೆ. ನಮ್ಮ ಅಂತರಾತ್ಮಕ್ಕೆ ನಿಷ್ಠರಾದರೆ ಬೇರೆಯವರಿಗೆ ಅಪ್ರಾಮಾಣಿಕರಾಗಲು ಸಾಧ್ಯವೇ ಇಲ್ಲ ಎಂದು ‘ಅಂತರಂಗಕ್ಕೊಂದು ಒಳ್ಳೆಯತನದ ಬೆಳಕು’ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮರುಗುವ ಮೇಷ್ಟ್ರು, ಮೊದಲ ಬರಹವು ‘ಸುಧಾ’ದಲ್ಲಿ ಪ್ರಕಟವಾದಾಗಿನ ಸಂಭ್ರಮವನ್ನು ನೆನಪಿಸಿದ್ದಾರೆ.ತುಂಟ ಕಣ್ಣುಗಳು ಜೀವನವನ್ನೊಮ್ಮೆ ಹಿಂತಿರುಗಿ ನೋಡಿವೆ. ಹಾಗಾಗಿ ಈ ಕೃತಿ ನಿಜ ಅರ್ಥದ ಮನಸ್ಸಿನ ಮಾತಾಗಿದೆ. ಹಿರಿದಾದ ಅರ್ಥವನ್ನೂ ಅಂತರಾಳದಲ್ಲಿ ಇರಿಸಿಕೊಂಡಿದೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books