ಮುಸ್ಸಂಜೆ ಮಾತು

Author : ಎಚ್. ಎಸ್. ವೆಂಕಟೇಶಮೂರ್ತಿ

Pages 72

₹ 100.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 70191 82729

Synopsys

ಮುಸ್ಸಂಜೆ ಮಾತು ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನವಾಗಿದೆ. ಕವಿ ಖಾಸಗೀತನವನ್ನು ಮುರಿದು ಸಾರ್ವತ್ರಿಕ ಆಗುವ ಕ್ಷಣ ಯಾವುದು? ಮುಸ್ಸಂಜೆ ಹೊತ್ತು ಸಂಕಲನದ ಬಹುತೇಕ ಕವಿತೆಗಳು ಎಚ್ ಎಸ್ ವೆಂಕಟೇಶಮೂರ್ತಿ ಅವರು ಕಳೆದ ಐದಾರು ವರುಷಗಳಲ್ಲಿ ಅನುಭವಿಸಿದ ಕಷ್ಟ-ಸುಖ, ಯಾತನೆ, ನೋವು, ಕತ್ತಲೆ-ಬೆಳಕು, ಭರವಸೆ- ವಾರ್ಧಿಕ್ಯಗಳ ಮೊತ್ತ. ಅವರ ಕವಿ ಮನಸ್ಸು ಕಂಡುದೆಲ್ಲವನ್ನೂ ಕವಿತೆಯಾಗಿ ಮಾಡುತ್ತಾ ಹೋಗುತ್ತದೆ. ಆಶ್ಚರ್ಯವೆಂದರೆ ಅವರ ಬದುಕಿನ ಒಳ ವಿವರಗಳು ಗೊತ್ತಿಲ್ಲದವರಿಗೂ ಈ ಕವಿತೆಗಳು ಅನ್ಯಾಯ ಮಾಡುವುದಿಲ್ಲ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books