ಮೌನ ಮಾತಾಗಿ

Author : ಕೆ ಗಿರಿಜಾ ರಾಜಶೇಖರ್

Pages 84

₹ 80.00




Year of Publication: 2022
Published by: ರೇಣು ಪ್ರಕಾಶನ ಇಟಗಿ
Address: ರೇಣು ಪ್ರಕಾಶನ ಇಟಗಿ,ನಂ.ಎಲ್ /191 , ನಿಜಲಿಂಗಪ್ಪ ನಗರ,ರಾಯಚೂರು

Synopsys

'ಮೌನ ಮಾತಾಗಿ' ಲೇಖಕಿ ಕೆ.ಗಿರಿಜಾ ರಾಜಶೇಖರ ಅವರ ಕವನ ಸಂಕಲನ. ಈ ಸಂಕಲನದಲ್ಲಿ ಪ್ರಾಮಾಣಿಕವಾದ ಅಭಿವ್ಯಕ್ತಿ ,ಲವಲವಿಕೆಯ ಭಾಷೆಯ ಬಳಕೆಯಾಗಿದೆ.ಇದರ ಜೊತೆಗೆ ಶಕ್ತಿಯುತ ರೂಪಕಗಳು ಒಳಗೊಂಡಿವೆ.ಕವನ ಸಂಕಲನದ ಮೂಲಕ ಕಾಲದ ತಲ್ಲಣ ಮತ್ತು ಒಡಲ ಸಂತಸವನ್ನು ಒಟ್ಟಗೆ ಕಟ್ಟಿ ಕೊಟ್ಟಿದ್ದಾರೆ.ಈ ಸಂಕಲನದಲ್ಲಿ ಇಪ್ಪತ್ತೆರಡು ಕವಿತೆಗಳಿವೆ. ಇಲ್ಲಿ ನೆನಪು ,ನೋವು , ಹತಾಶೆ ,ತೊಳಲಾಟ ,ಸಂಕಟ ,ನಿರಾಸೆ , ವಿಷಾದ , ಆಕ್ಷೇಪ,ಪ್ರತಿರೋಧ, ಪರಿಸರ ಪ್ರಜ್ಞೆಯ ಜೊತೆಗೆ ತಾಯಿ ಪ್ರಜ್ಞೆಗಳು ತೆರೆದುಕೊಂಡಿವೆ.ತಾವು ಕಂಡ ಸಮಾಜವನ್ನು ಅದರ ಚೆಲುವು ಮತ್ತು ಸತ್ಯವನ್ನು ಸ್ತ್ರೀತ್ವದ ನೆಲೆಯಿಂದ ನೋಡಿದ್ದಾರೆ. ನಮ್ಮ ದೈನಿಕ ಬದುಕು ಎಲ್ಲವೂ ವ್ಯವಹಾರಿಕವಾಗಿ ಮಾರ್ಪಟ್ಟು ಮಾನವೀಯ ಸಂಬಂಧಗಳು ಪಲ್ಲಟಗೊಂಡಿವೆ. ಹಿಂಸೆ , ಅಸಹಿಷ್ಣುತೆಯ ದುರಿತ ಕಾಲ ಇನ್ನಿಲ್ಲದಂತೆ ಕನಲಿಸುತ್ತಿದೆ. ಕಂಡುಂಡ ಸಂವೇದನೆಗಳನ್ನು ಲೋಕದೊಂದಿಗೆ ಹಂಚಿಕೊಂಡ ಇಲ್ಲಿನ ಕಾವ್ಯದ ವಿನ್ಯಾಸದಲ್ಲಿ ಒಡಲ ಹಾಡಿನ ಅಂತಃಕರಣ , ಬೆಚ್ಚನೆಯ ಕನಸು ,ಜೀವಪರ ಚಿಂತನೆ, ಬಹುತ್ವದ ಆಶಯಗಳನ್ನು ವಿಸ್ತರಿಸುವ ಹೂ ಮನಸ್ಸಿನ ಭಾವಗಳಿವೆ.

About the Author

ಕೆ ಗಿರಿಜಾ ರಾಜಶೇಖರ್

ಕೆ ಗಿರಿಜಾ ರಾಜಶೇಖರ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ರಾಯಚೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳ ಜೊತೆಗೆ ತಾಲೂಕ ಸಮ್ಮೇಳನ, ಜಿಲ್ಲಾ ಸಮ್ಮೇಳನ ಹಾಗೂ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಪಾದಿತ ಕೃತಿ : 'ತತ್ರಾಣಿ ' ಕವನ ಸಂಕಲನ : "ಮೌನ ಮಾತಾಗಿ' ...

READ MORE

Related Books