ಉರಿವ ಏಕಾಂತ ದೀಪ

Author : ಸಿ.ಎಂ.ಗೋವಿಂದರೆಡ್ಡಿ

Pages 132

₹ 120.00




Year of Publication: 2011
Published by: ಸಿವಿಜಿ ಇಂಡಿಯಾ
Address: ಕಸ್ತೂರ್ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

ಪಂಪನಿಂದ ಇಲ್ಲಿಯವರೆಗೂ ಅನೇಕ ಕಾವ್ಯದ ತಲೆಮಾರುಗಳು ಈ ನೆಲವನ್ನು ತಬ್ಬಿ ನಿಂತಿವೆ. ಬಹುಶಃ ಕಾವ್ಯದ ಈ ಅನನ್ಯತೆಯು ಆಧುನಿಕತೆ ಬೆಳೆದಷ್ಟೂ ಅವೂ ಬೆಳೆಯುತ್ತಿವೆ. ಇದರಲ್ಲಿ ಗೊತ್ತಾಗುತ್ತದೆ ಸಾಹಿತ್ಯದ ಸದಾ ಕಾಲದ ವಸ್ತು ಮನುಷ್ಯನೆಂದು. ಸಾಹಿತ್ಯ ಮನುಷ್ಯನ ಬಗ್ಗೆ ಇದೆ. ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಆಸ್ಥೆಯಲ್ಲಿ ಸಾಹಿತ್ಯವೆಂಬುದು ಅರಳುತ್ತದೆ. ಈ ಚಟುವಟಿಕೆಯಲ್ಲಿ ಆ ಹುಟ್ಟಿಗೆ ಕಾರಣವಾದ ಆಸ್ಥೆಯ ಸಾರ್ಥಕತೆಯಿದೆ. ‘ಉರಿವ ಏಕಾಂತ ದೀಪ’ದಲ್ಲಿ ಇಂತಹ ಆಸ್ಥೆಯಿದೆ. ಹೆಸರೇ ಹೇಳುವ ಹಾಗೆ ಈ ದೀಪದಲ್ಲಿ ಬೆಳಕು, ಬೆಂಕಿ ಮತ್ತು ಮನುಷ್ಯನನ್ನು ಸದಾ ಕಾಡುವ ಏಕಾಂತವಿದೆ. ನಮ್ಮೊಳಗಿನ ಈ ದೌರ್ಬಲ್ಯಗಳು ಒಳಗನ್ನು ಅರ್ಥಮಾಡಿಕೊಳ್ಳುವ ಹೊರಗಿನದನ್ನು ಒಳಗು ಮಾಡಿಕೊಳ್ಳುವ ಕ್ರಿಯೆಯನ್ನು ಈ ಪದ್ಯಗಳು ಸಾಬೀತು ಮಾಡುತ್ತಾ ಹೋಗುತ್ತವೆ. ನಮ್ಮ ಅನುಭವಗಳು ಕಾವ್ಯವೆಂದಾದರೆ ಅದಕ್ಕೂ ಒಂದು ಅನುಭವವಿರಬೇಕು. ಇದು ತತ್ವಶಾಸ್ತ್ರದ ಉಲ್ಲೇಖವೆನಿಸಿದರೂ ಕೂಡ ಇಲ್ಲಿ ಕವಿ ಮತ್ತು ಓದುಗ ಮುಖ್ಯವೆನಿಸುತ್ತಾ ಹೋಗುತ್ತಾನೆ. ಕವಿಯೇ ಕಾವ್ಯದ ಮಾಧ್ಯಮವಾದ್ದರಿಂದ ಅವನು ಹೇಗೆ ಕಾವ್ಯವನ್ನು ಓದುಗನಿಗೆ ತಲುಪಿಸುತ್ತಾನೆಂಬ ಅರಿವಿರಬೇಕು. ಅಂತಹ ಅರಿವು ಈ ಸಂಕಲನದ ಪದ್ಯಗಳಲ್ಲಿದೆ. 

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books