ಸೃಜನಶೀಲ ಕಾವ್ಯಸಿರಿ

Author : ಸಂತೋಷ್ ಬಿದರಗಡ್ಡೆ

Pages 162

₹ 100.00




Year of Publication: 2018
Published by: ಸೃಜನಶೀಲ ಸಾಹಿತ್ಯ ಬಳಗ ಹಾವೇರಿ

Synopsys

ಸೃಜನಶೀಲ ಕಾವ್ಯಸಿರಿ ಸಂತೋಷ್ ಬಿದರಗಡ್ಡೆ ಅವರ ಕವನ ಸಂಕಲನವಾಗಿದೆ. ಇಂದು ಸಾಹಿತ್ಯದ ಕಡೆಗೆ ಯುವಕ ಯುವತಿಯರು ಆಗಮಿಸುತ್ತಿರುವುದು ಸಂತಸದ ಸಂಗತಿ. ಯುವಜನಾಂಗ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀಧರ ಆಸಂಗಿಹಾಳ ಆವರ ಮುಂದಾಳತ್ವದಲ್ಲಿ ಹೊಸ ಸಾಹಿತ್ಯ ಬಳಗವೊಂದು ಸೇವೆಗೈಯಲು ಮುಂದಾಗಿರುವುದು, ಸಾಹಿತ್ಯ ಲೋಕದಲ್ಲಿ ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬ ನಂಬಿಕೆ ಇದೆ. ಸೃಜನಶೀಲ ಸಾಹಿತ್ಯ ಬಳಗದಿಂದ ಉಷ್ಣಸಿರಿ ಹೊರಬರುತ್ತಿರುವುದು ಹಾಗೂ ಇಲ್ಲಿನ ಪ್ರತಿಯೊಬ್ಬ ಕವಿಗಳ ಕವನದ ಭಾಷೆ ವಿಭಿನ್ನವಾಗಿದೆ ಮತ್ತು ಸುಂದರವಾಗಿದೆ. ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೋಷ್ ಬಿದರಗಡ್ಡೆ
(20 May 1987)

ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ  ಶಿಕ್ಷಕ ಸೇವೆಯಲ್ಲಿರುತ್ತಾರೆ.  ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ  ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು   ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು  ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ...

READ MORE

Related Books