ಚೈತಾಗ್ನಿ

Author : ಪಲ್ಲವಿ ಬೇಲೂರು

Pages 92

₹ 110.00




Year of Publication: 2021
Published by: ಯದುನಂದನ ಪ್ರಕಾಶನ

Synopsys

ಚೈತಾಗ್ನಿ ಕವನಸಂಕಲನವಾಗಿದೆ. ಕವಿತೆಯನ್ನು ಬರೆದು ಓದುಗರ ಬಳಿ ಸೈ ಎನಿಸಿಕೊಳ್ಳುವುದು ಬಹಳ ಸವಾಲಿನ ಕೆಲಸ. ಇಂತಹ ಸವಾಲಿನಲ್ಲೂ ಸೈ ಎನಿಸಿಕೊಳ್ಳುವರಿದ್ದಾರೆ ಎಂದರೆ ಅವರ ಕವಿತ್ವ ಎಷ್ಟು ಪ್ರಖರವಾಗಿದೆ ಎಂದು ಕಲ್ಪಿಸಿಕೊಳ್ಳಬೇಕು. ವಾಮನ ಹೇಳುವಂತೆ "ಪ್ರತಿಭೆ ಕಾವ್ಯದ ಬೀಜ" ಎನ್ನುವ ಹಾಗೆ ಕವಿತೆಗಳನ್ನು ಬರೆಯುವಾಗ ಕವಿಗೆ ಇರಬೇಕಾದದ್ದು ಪ್ರತಿಭೆ. ಇಂತಹ ಪ್ರತಿಭೆಗಳಲ್ಲಿ ನಮ್ಮ ನಡುವಿನ ಅಪರೂಪದ ಕವಯಿತ್ರಿ ಪಲ್ಲವಿ ಬೇಲೂರು ಅವರು ಕೂಡ ಓರ್ವರು. ಅವರ ಕಾವ್ಯಶಕ್ತಿ ಬಹಳಷ್ಟು ಪರಿಚಿತ. ಪದಗಳ ನಾವಿನ್ಯತೆ, ಅವರ ಕಾವ್ಯದ ವಸ್ತು ಎಲ್ಲವೂ ವಿಭಿನ್ನ ಹಾಗೂ ವಿಶೇಷವಾಗಿರುತ್ತದೆ. "ಅಭಿಸಾರಿಕೆ" ಎಂಬ ಕವನ ಸಂಕಲನದಿಂದ ಓದುಗ ವಲಯಕ್ಕೆ ಆಪ್ತರಾಗಿರುವ ಇವರ "ಚೈತಾಗ್ನಿ" ಕೃತಿಯೂ ಕೂಡ ಎಲ್ಲರನ್ನೂ ಗೆಲ್ಲುತ್ತದೆ ಎಂಬ ಭರವಸೆ ಓದುಗನಾಗಿ ನನಗೂ ಇದೆ. ಎಂದು ರಾಜೇಶ್ ಬಿ ಹೊನ್ನೇನಹಳ್ಳಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪಲ್ಲವಿ ಬೇಲೂರು

ಪಲ್ಲವಿ ಬೇಲೂರು ಅವರು ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲ್ ಗ್ರಾಮದವರು. ತಂದೆ ಗುಂಡುರಾಜ್ ಮತ್ತು ತಾಯಿ ದಾಕ್ಷಾಯಿಣಿ. ಬೇಲೂರು ತಾಲ್ಲೂಕಿನ ದೊಡ್ಡಕೋಡಿಹಳ್ಳಿ ಗ್ರಾಮದ ಮಾರುತಿ.ಕೆ.ಬಿ ಯವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಬೇಲೂರು ತಾಲ್ಲೂಕಿನ ಸ.ಕಿ.ಪ್ರಾ.ಶಾಲೆ. ಮಂಚನಾಯಕನಹಳ್ಳಿ, ಸ.ಹಿ.ಪ್ರಾ.ಬಾಲಕಿಯರ ಶಾಲೆ ಬೇಲೂರು ಹಾಗೂ ಸ.ಕಿ.ಪ್ರಾ.ಶಾಲೆ ಮಲ್ಲನಹಳ್ಳಿ ಶಾಲೆಗಳಲ್ಲಿ 15 ವರ್ಷಗಳಿಂದ  ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಮುನ್ನೂರಕ್ಕೂ ಹೆಚ್ಚು ಕವನಗಳು ಮತ್ತು ಹಲವಾರು ಲೇಖನಗಳನ್ನು ...

READ MORE

Related Books