ಬಂದೂಕು ಹಿಡಿದ ಕೈಗಳು

Author : ಅಂಜಲಿ ಬೆಳಗಲ್

Pages 80

₹ 100.00




Published by: ಅಂಬೆ ಪ್ರಕಾಶನ
Address: ಅಂಬೆ ಪ್ರಕಾಶನ, ಹೊಸಪೇಟೆ, ಬಳ್ಳಾರಿ ಜಿಲ್ಲೆ

Synopsys

ಬಂದೂಕು ಹಿಡಿದ ಕೈಗಳು' ಈ ಕವನ ಸಂಕಲನವು ಅಸಮಾನತೆ ವಿರೋಧಿಸುತ್ತದೆ. ನೋವನ್ನು ಮರೆಸಲೆತ್ನಿಸುತ್ತದೆ. ಅನ್ಯಾಯದ ವಿರುದ್ದ ಹೋರಾಟದ ಸ್ಪುರ್ತಿಯನ್ನು ಜನ ಸಾಮಾನ್ಯರಲ್ಲಿ ಬೆಳೆಸುತ್ತದೆ. ಮನುಷ್ಯರನ್ನು ಕಾಡುತ್ತಿರುವ ಅಸಮಾನತೆ, ತಾರತಮ್ಯಗಳನ್ನು ಕೊನೆಗಾಣಿಸಲು ಬಂದೂಕು ಹಿಡಿದ ಕೈಗಳು ಸಾಧನವಾಗುತ್ತವೆ ಎಂಬ ಬಂದೂಕು ಹಿಡಿದ ಹಂಬಲದ ಪ್ರತೀಕ ಇಲ್ಲಿದೆ'.ಕವಿತೆಯೊಂದು 'ನಾನು ಪ್ರತಿರಾತ್ರಿ ಸತ್ತಾಗ ನಿನ್ನ ಹಾಸಿಗೆಯಲ್ಲಿ ನೀನು ನನ್ನ ನೆತ್ತರು ಹೀರುತ್ತಿದ್ದಿ/ ಹಸಿದ ನಿನ್ನ ದೇಹಕ್ಕೆ ದಾಹ ತೀರಿಸಲು..' ಎನ್ನುವ ಯಾತನೆಯೊಂದಿಗೆ ಆರಂಭವಾಗುತ್ತದೆ. 'ಒಂಚೂರು ಕರುಣೆ ಇಲ್ಲದ ನಿನ್ನ ನಾಲಿಗೆ ಚಪಲಕ್ಕೆ ಒಮ್ಮೆ ಗರಬಡಿಬಾರದೆ..' ಎನ್ನುವ ಅಸಹಾಯಕತೆ, ಮುಂದೆ ಇದೇ ರಕ್ತ ರಾತ್ರಿಯ ಹಾವಳಿ / ಮತ್ತೆ ನನ್ನ ಹಾಸಿಗೆ ಬೀದಿನಾಯಿಗಳಿಗೆ ಹಂಚುತ್ತಿತ್ತು' ಎನ್ನುವ ನಿರಾಶೆಯ ನೋವು ಎದೆ ಹಿಂಡುತ್ತದೆ.ಸಮಾಜದ ವಿವಿದ ಸಮಸ್ಯಗಳನ್ನು ಲೇಖಕಿ ಕವನದ ಮೂಲಕ ಪ್ರಶ್ನಿಸಿದ್ದಾರೆ

About the Author

ಅಂಜಲಿ ಬೆಳಗಲ್
(16 May 1988)

ಬಳ್ಳಾರಿಯ ಜಿಲ್ಲೆಯ ಹೊಸಪೇಟೆಯ ಅಂಜಲಿ ಬೆಳಗಲ್ ಕಲಾ ಕುಟುಂಬದ ಹಿನ್ನೆಲೆಯಿಂದ ಬಂದವರು.  ಅಂಜಲಿ ಅವರ ತಂದೆ ಹುಲುಗಪ್ಪ ಬೆಳಗಲ್ ಅವರು ಕೂಲಿಕಾರ ವೃತ್ತಿ ಮಾಡುತ್ತಲೇ ಸಂತ ಶಿಶುನಾಳ ಶರೀಫರ ಅನುಯಾಯಿ ಆಗಿದ್ದರು. ಹುಲುಗಪ್ಪ ಅವರು ಹೆಸರಾಂತ ತೊಗಲು ಬೊಂಬೆಯಾಟ ಕಲಾವಿದ ಬೆಳಗಲ್ ವೀರಣ್ಣನವರ ಅಣ್ಣನ ಮಗ. ಅಂಜಲಿ ಅವರ ತಾಯಿ ಹುಲಿಗೆಮ್ಮ ಗೃಹಿಣಿ, ಹುಲಿಗೆಮ್ಮ ಅವರು ತೊಗಲು ಬೊಂಬೆಯಾಟದ ಮತ್ತೊಬ್ಬ ಕಲಾವಿದ ಯಡ್ರಾಮನಹಳ್ಳಿ ದೊಡ್ಡ ಭರಮಪ್ಪನವರ ಹಿರಿಯ ಮಗಳು. ತಂದೆ ಮತ್ತು ತಾಯಿ ಕಡೆಯಿಂದ ಕಲಾ ಕುಟುಂಬದ ಹಿನ್ನೆಲೆ ಅಂಜಲಿ ಅವರಿಗಿದೆ.  ಕವಿತೆ ಬರೆಯುವುದರಲ್ಲಿ ಆಸಕ್ತರಾಗಿರುವ ಅಂಜಲಿ ಅವರಿಗೆ ಶಂಕರ ಪ್ರಶಸ್ತಿ (2004), ರಾಜ್ಯ ಯುವ ಪ್ರತಿಭಾ ಪುರಸ್ಕಾರ (2009), ...

READ MORE

Related Books