ಖಂಡಕಾವ್ಯಗಳು

Author : ಕೆ.ಬಿ. ಸಿದ್ದಯ್ಯ

Pages 172

₹ 150.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಜ್ಞೆ ಈ ಕೃತಿಯ ಲೋಕದರ್ಶನ. ದಲಿತ ಲೋಕದ ಬಕಾಲ, ಜಾಂಬವ, ದಕ್ಲಕಥಾದೇವಿ ಹೀಗೆ ಅನಾದಿ ಮೂಲದ ಈ ಮಹಾ ಪಾತ್ರಗಳನ್ನು ನೆಪವಾಗಿಟ್ಟುಕೊಂಡು ಅವರ ದನಿ ಸಂವೇದನೆಯಾಗಿ, ಇಡೀ ದಲಿತ ಸಮುದಾಯಗಳ ಬದುಕಿನ ಜೀವ ನೋವುಗಳಿಗೆ ನುಡಿಗೊಟ್ಟಿದ್ದಾರೆ. ಹೀಗೆ ನುಡಿ ಕೊಡುವಾಗ ಆ ಎಲ್ಲ ಜೀವಗಳ ಎದೆಯೊಳಗಿನ ತಾಯಿಭಾವ ಮಾತನಾಡಿದೆ. ಹಿರಿಯ ಕವಿ ಕೆ.ಬಿ. ಸಿದ್ದಯ್ಯನವರ ನಾಲ್ಕು ಖಂಡಕಾವ್ಯಗಳಲ್ಲಿ ಜೀವವಾಹಿನಿಯಾಗಿ ಹರಿದಿರುವ ಕಾವ್ಯಸತ್ಯ ಕಾವ್ಯಸತ್ವವಿದು. ಖಂಡಕಾವ್ಯಗಳಲ್ಲಿ ದಲಿತಲೋಕದ ರೂಪಕ ಪ್ರತಿಮೆಗಳು ಇಡುಕಿರಿದು ಬರುವಂತೆಯೇ ಬೌದ್ಧಧರ್ಮದ ಪಾರಿಭಾಷಿಕ ದರ್ಶನ ದೀಪ್ತಿಗಳು ಕೂಡ ಈ ಕೃತಿಯಲ್ಲಿ ಸಹಜವಾಗಿ ಮೂಡಿಬಂದಿದೆ.

About the Author

ಕೆ.ಬಿ. ಸಿದ್ದಯ್ಯ
(04 March 1954 - 18 October 2019)

ಮಾಗಡಿ ತಾಲ್ಲೂಕು ಕೆಂಕೆರೆಯ ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಇಂಗ್ಲೀಷ್ ಉಪನ್ಯಾಸಕರು, ಪ್ರಾಧ್ಯಾಪಕರು. ಕವಿ ಸಿದ್ಧಯ್ಯ ಅವರು ಬಕಾಲ, ದಕ್ಷಕಥಾದೇವಿ ಕಾವ್ಯ, ಅನಾತ್ಮ(ಕಾವ್ಯ)  ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ) ದಲಿತಕಾವ್ಯ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (2004) ಸಂದಿದೆ. ...

READ MORE

Related Books