ಕಾರ್ತಿಕದ ಮೋಡ

Author : ಚೆನ್ನವೀರ ಕಣವಿ

Pages 60

₹ 30.00




Year of Publication: 1986
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತ, ಮೈಸೂರು
Phone: 2513821/9880749412

Synopsys

ಕಾರ್ತಿಕದ ಮೋಡ ಕಣವಿಯವರ ಹನ್ನೆರಡನೇ ಕವನ ಸಂಕಲನ. 1986ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಸಂಕಲನದಲ್ಲಿ ಒಟ್ಟು 30 ಕವಿತೆಗಳಿವೆ.

ಗೋಕಾಕ ಚಳುವಳಿ ಕನ್ನಡ ನಾಡಿನಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಧಾರವಾಡದಲ್ಲಿ ಸತ್ಯಾಗ್ರಹ ನಡೆಸಿದ ಕಣವಿಯವರು ಕನ್ನಡಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿದ್ದರು. ಆಗ ರಚಿಸಿದ ಕವಿತೆ 'ಸತ್ಯಾಗ್ರಹ' ಕವಿಮನದ ಭಾವನೆಗಳನ್ನು ಚಿತ್ರಿಸಿದೆ. 

ಕನ್ನಡ ನಾಡಿನ ಅನ್ನ, ನೀರು, ಗಾಳಿಯನ್ನುಂಡ ತಾಯ್ನುಡಿಗೆ ದ್ರೋಹ ಬಗೆಯುವ ಭ್ರಷ್ಟ ಜನರ ವಿರುದ್ದ ಕವಿ ಸಮರ ಸಾರಿದ್ದಾರೆ. ಪರಿಪೂರ್ಣ ಚೆಲುವ ಕನ್ನಡನಾಡು ಆಗುವವರೆಗೆ ನಾವು ಉದಯವಾಗಲಿ ಎಂದೇ ಹಾಕೋಣ ಎಂದು ಬರೆದಿದ್ದಾರೆ. ಕಣವಿಯವರ ಕವಿತೆಯಲ್ಲಿ ಪ್ರತಿಭಟನೆ ಎದ್ದು ಕಾಣುವುದಿಲ್ಲ. ಆದರೆ, ವಾಸ್ತವ ಅರಿತು ನಡೆಯುವ, ಪ್ರತಿಸ್ಪಂದಿಸುವುದನ್ನು ಕಾಣಬಹುದು.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books