ಬೆಂಕಿಯಲ್ಲೂ ಬಾಡದ ಹೂವು

Author : ಸೌಮ್ಯ ಕೆ.ಆರ್.

Pages 116

₹ 100.00




Year of Publication: 2016
Published by: ಪ್ರಬುದ್ಧ ಪ್ರಕಾಶನ
Address: ಕನಕಪುರ
Phone: 9986044233

Synopsys

ಸೌಮ್ಯಾ ಕೆ.ಆರ್. ಅವರ ಮೊದಲ ಕವನ ಸಂಕಲನ ’ಬೆಂಕಿಯಲ್ಲೂ ಬಾಡದ ಹೂವು'.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಂಜಗೆರೆ ಜಯಪ್ರಕಾಶ್ ಅವರು ಈ ಸಂಕಲನದ ಕವಿತೆಗಳ ಕುರಿತು ’ಒಂದು ಕಡೆ ಜಗದ ಬೆಂಕಿ. ಇನ್ನೊಂದು ಕಡೆ ಒಡಲೊಳಗಿನ ಬೆಂಕಿ ಇವೆರೆಡರ ಝಳಕ್ಕೆ ಸೌಮ್ಯಾ ಸಾಕಷ್ಟು ಬೆಂದಿರುವುದು ಹೌದು, 'ಬೆಂಕಿಯಲ್ಲಿ ಸುಟ್ಟ ಮಣ್ಣು ಮದಿರೆಯ ಬಟ್ಟಲಾಗುವ ಹಾಗೆ ಆಳವಾಗಿ ಕೊರೆಯಲ್ಪಟ್ಟ ಬಿದಿರು ಕೊಳಲಾಗುವ ಹಾಗೆ ರೂಪಗೊಳ್ಳತೊಡಗಿದ್ದಾಳೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಸೌಮ್ಯ ಕೆ.ಆರ್.
(20 June 1983)

ಕವಯಿತ್ರಿ ಸೌಮ್ಯ ಕೆ.ಅರ್. ಅವರು ಬೆಂಗಳೂರಿನ ಸೆಂಟರ್ ಫಾರ್ ಸೋಷಿಯಲ್ ಡೆವಲೆಪ್ ಮೆಂಟ್ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1983ರ ಜೂನ್ 20ರಂದು ಜನಿಸಿದ ಅವರು ರಾಮನಗರ ಜಿಲ್ಲೆಯ ಕನಕಪುರದವರು. ಬೆಂಗಳೂರು ವಿಶ್ವವಿದ್ಯಾಲಯದ ಪದವೀದರರು.  ಕನಕಪುರದ ಪ್ರಬುದ್ಧ ಪ್ರಕಾಶನವು ಸೌಮ್ಯ ಅವರ ಎರಡು ಸಂಕಲನಗಳನ್ನು ಪ್ರಕಟಿಸಿದೆ.’ಬೆಂಕಿಯಲ್ಲೂ ಬಾಡದ ಹೂ’, ’ಬಯಲಿಗೂ ಗೋಡೆಗಳು’ ಸೌಮ್ಯ ಅವರ ಸಂಕಲನಗಳು. ಚಾಮರಾಜನಗರದ ರಂಗವಾಹಿನಿ ನೀಡುವ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯು ಸೌಮ್ಯ ಅವರ ’ಬಯಲಿಗೂ ಗೋಡೆಗಳು’ ಸಂಕಲನಕ್ಕೆ ಸಂದಿದೆ. ...

READ MORE

Related Books