ಬೆಟ್ಟಕ್ಕೆ ಚಳಿಯಾದರೆ

Author : ಕೆ.ವಿ. ಸುಬ್ಬಣ್ಣ

Pages 38

₹ 4.00




Year of Publication: 1981
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾಲೂಕು ಸಾಗರ, ಜಿಲ್ಲೆ: ಶಿವಮೊಗ್ಗ-577401

Synopsys

ಬೆಟ್ಟಕ್ಕೆ ಚಳಿಯಾದರೆ-ಕೆ.ವಿ.ಸುಬ್ಬಣ್ಣಅವರು ಕೆ.ವಿ.ಅಕ್ಷರ ಜೊತೆಗೂಡಿ ಬರೆದ ಮಕ್ಕಳ ನಾಟಕ. ಪಿ.ಎಸ್.ರಾಮಪ್ಪ ಅವರು ವಿಜಯ ತೆಂಡೂಲ್ಕರ್ ಬರೆದ ಮಕ್ಕಳ ನಾಟಕವನ್ನು ಅನುವಾದಿಸಿದ್ದು, ಅಲ್ಲಿಯ ಪರಿಕರಗಳನ್ನು ಬಳಸಿ, ಬೇರೆ ರೀತಿಯ ನಾಟಕ ರಚಿಸಬಹುದೆಂಬ ವಿಚಾರವೇ ಈ ಕೃತಿ ರಚನೆಗೆ ಕಾರಣ ಎಂದು ನಾಟಕಕಾರರು ಹೇಳಿದ್ದಾರೆ.

ಸನಾತನ ಧರ್ಮಸಂಸ್ಥೆಯ ಸದಸ್ಯರ ಗುಂಪು ಹಾಗೂ ಪವಾಡ ವಿರೋಧಿ ಸದಸ್ಯರ ಗುಂಪುಗಳು ತಮ್ಮ ತಮ್ಮ ವಿಚಾರಗಳನ್ನು ಸಮರ್ಥಿಸಿಕೊಳ್ಳುತ್ತಲೇ ಈ ನಾಟಕ ಸನಾತನ ಹಾಗೂ ವೈಜ್ಞಾನಿಕತೆಯ ಮಧ್ಯೆ ನಡೆಯುತ್ತಾ ಬಂದ ಸಂಘರ್ಷದ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books