ಮಕ್ಕಳೇ, ಆಡ ಬನ್ನಿ!

Author : ಪ್ರಣತಾರ್ತಿಹರನ್

Pages 78

₹ 20.00




Year of Publication: 1994
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಸಂಕೇತಿ ಸಮುದಾಯದಲ್ಲಿ ಸಂಗೀತ, ಗಮಕ, ವೇದಕ್ಕೆ ಇರುವ ಪ್ರಾಮುಖ್ಯ ಸಾಹಿತ್ಯಕ್ಕೆ ಇರಲಿಲ್ಲ. ಆ ಕೊರತೆಯನ್ನು ತುಂಬುವ ಯತ್ನವಾಗಿ ಈ ಕೃತಿಯನ್ನು ಮೊದಲಿಗೆ ಪ್ರಕಟಿಸಲಾಯಿತು. ಕೃತಿಯಲ್ಲಿ  ಮಕ್ಕಳ ನಾಲ್ಕು ನಾಟಕಗಳಿವೆ. ಇವುಗಳಲ್ಲಿ ಬಗೆ ಬಗೆಯ ಭಾವನೆಗಳ ಅಭಿನಯಕ್ಕೆ ಆಸ್ಪದವಿದ್ದು ವಿಶೇಷ ರೀತಿಯ ಪ್ರಸಾದನಕ್ಕೂ ಅವಕಾಶವಿದೆ. ಮಕ್ಕಳ ಮನಸ್ಸನ್ನು ಮಾನವತೆಯ ವಿಶಾಲ ವೇದಿಕೆಗೆ ಒಗ್ಗಿಸುವುದು ಕೃತಿಯ ಉದ್ದೇಶವಾಗಿದೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books