ಒಂದಾನೊಂದು ಕಾಡಿನಲ್ಲಿ (ಮಕ್ಕಳ ನಾಟಕ)

Author : ಎ.ಎನ್. ಪ್ರಸನ್ನ

Pages 56

₹ 0.00




Year of Publication: 1980
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560018

Synopsys

ಲೇಖಕ ಎ.ಎನ್. ಪ್ರಸನ್ನ ಅವರು ಮಕ್ಕಳಿಗಾಗಿ ಬರೆದ ನಾಟಕ-ಒಂದಾನೊಂದು ಕಾಡಿನಲ್ಲಿ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ಇಂದಿಗೂ ಬರಹಗಳ ಅಭಾವ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ‘ಒಂದಾನೊಂದು ಕಾಡಿನಲ್ಲಿ’ ಕೃತಿಯು ಮಹತ್ವ ಪಡೆಯುತ್ತದೆ. 1979ರಲ್ಲಿ ಮಕ್ಕಳ ಅಂತಾರಾಷ್ಟ್ರೀಯ ವರ್ಷ ಎಂದೂ ಘೋಷಣೆಯಾಗಿತ್ತು. ಹಂಪ ನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಕಿರಿಯರ ಪುಸ್ತಕ ಮಾಲೆ ಆರಂಭಿಸಿ, 101 ಪುಸ್ತಕಗಳ ಪ್ರಕಟಣೆ ಕಾರ್ಯಕ್ಕೆ ಚಾಲನೆ ಸಿಕ್ಕಿತು. ಅದರ ಪರಿಣಾಮವೇ ಈ ಕೃತಿ.

ಹಂಪನಾ ಹೇಳುವಂತೆ ‘ಈ ಮಾಲೆಯ ಪುಸ್ತಕಗಳು ನಾಡಿನ ಮೂಲೆ ಮೂಲೆಯ ಮಕ್ಕಳ ಕೈ ಸೇರಿ, ಅವರ ಮನೋವಿಕಾಸಕ್ಕೆ ನೆರವಾಗುವುದೆಂಬ ಖಚಿತ ಭರವಸೆ ಇದೆ’ ಎಂದು ಕೃತಿಗಳ ಸ್ವರೂಪವನ್ನು, ಮಹತ್ವವನ್ನು ಹೇಳಿದ್ದಾರೆ.

ಬೆಂಗಳೂರಿನ ಜವಾಹರ ಬಾಲಭವನದಲ್ಲಿ (1977) ಏರ್ಪಡಿಸಿದ್ದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಈ ನಾಟಕವು ದ್ವಿತೀಯ ಬಹುಮಾನ ಪಡೆದಿದೆ. 

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books