ಕರ್ನಾಟಕ ರತ್ನಗಳು

Author : ವಿಶಾಲಾ ಆರಾಧ್ಯ

Pages 72

₹ 70.00




Year of Publication: 2021
Published by: ಅಲ್ಲಮ ಪ್ರಕಾಶನ
Address: ಬೆಂಗಳೂರು- 560100

Synopsys

‘ಕರ್ನಾಟಕ ರತ್ನಗಳು’ ಲೇಖಕಿ ವಿಶಾಲಾ ಆರಾಧ್ಯ ಅವರು ಮಕ್ಕಳಿಗಾಗಿ ಬರೆದಿರುವ ನಾಟಕ. ಈ ಕೃತಿಗೆ ಲೇಖಕ ಹ.ಸ. ಬ್ಯಾಕೋಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಮಗುವಾಗಿ ಮಕ್ಕಳನ್ನು ಪ್ರೀತಿಸುವವರಿಂದ ಮಾತ್ರ ಮಕ್ಕಳ ಸಾಹಿತ್ಯವನ್ನ ರಚಿಸಲು ಸಾಧ್ಯ. ಅಂತವರಿಂದ ಮಾತ್ರ ಶುದ್ಧವಾದ ಮಕ್ಕಳ ಸಾಹಿತ್ಯವನ್ನ ನಿರೀಕ್ಷಿಸಬಹುದು. ಬಹು ಮುಖ್ಯವಾಗಿ ಮುಗ್ಧಭಾವಗಳ ಸಂಗಮವಾಗಿರುವ ಮಕ್ಕಳಿಗೆ ಇಷ್ಟವಾಗುವಂತಹ ಯಾವ ಬಗೆಯ ಸಾಹಿತ್ಯ ರಚನೆಯಾಗಬೇಕು, ಮೊಗ್ಗಿನಂತಿರುವ ಅವರ ಮನಸ್ಸು ಅರಳಬೇಕು ಎನ್ನುವ ಸಂಗತಿ ಗಮನದಲ್ಲಿರಬೇಕು. ಪ್ರಪಂಚವನ್ನು ಬೆರಗುಗಣ್ಣಿನಿಂದ ನೋಡುತ್ತ ಹೊಸತನ್ನು ಸ್ವೀಕರಿಸುವ ಮಕ್ಕಳಿಗೆ ಹೊಸತನ್ನು ನೀಡುವ ಸಾಹಿತ್ಯ ರಚನೆ ಇಂದಿಗೆ ಅತ್ಯಗತ್ಯವಾಗಿದೆ. ಅಂತಹ ಸಾಹಿತ್ಯ ರಚನೆಯಲ್ಲಿ ತೊಡಗಿರುವವರ ಪೈಕಿ ವಿಶಾಲಾ ಆರಾಧ್ಯ ಕೂಡ ಒಬ್ಬರು. ಈಗಾಗಲೇ ಬೊಂಬಾಯಿ ಮಿಠಾಯಿ ಮತ್ತು ಗೊಂಬೆಗೊಂದು ಚೀಲ ಎನ್ನುವ ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ನಾಟಕದ ಮೂಲಕ ಮಕ್ಕಳಿಗೆ ಕರ್ನಾಟಕ ರತ್ನಗಳ ಪರಿಚಯವನ್ನ ಮಾಡಿಕೊಡಲು ಮುಂದಾಗಿರುವುದು ವಿಶೇಷ. ವಿಭಿನ್ನ ಸರಳಶೈಲಿಯ ಸಂಭಾಷಣೆಯ ತಂತ್ರದೊಂದಿಗೆ ನಾಟಕ ರಚಿಸಿದ್ದಾರೆ. ನಿಜಕ್ಕೂ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ ಬ್ಯಾಕೋಡ.

About the Author

ವಿಶಾಲಾ ಆರಾಧ್ಯ

ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ...

READ MORE

Related Books