ಚಿಟ್ಟೆ

Author : ಬೇಲೂರು ರಘುನಂದನ್

Pages 80

₹ 180.00




Year of Publication: 2022
Published by: ಶಾರದಾ ಪ್ರತಿಷ್ಠಾನ
Address: ಅಗಲಕೋಟೆ ಮಾಗಡಿ ತಾ. ರಾಮನಗರ ಜಿಲ್ಲೆ - 562120
Phone: 9606883156

Synopsys

ಲೇಖಕ ಬೇಲೂರು ರಘುನಂದನ್ ಅವರ ಮಕ್ಕಳ ಏಕವ್ಯಕ್ತಿ ನಾಟಕ ಚಿಟ್ಟೆ. ಸಿ. ಬಸವಲಿಂಗಯ್ಯ ಅವರು ಕೃತಿಯ ಬೆನ್ನುಡಿಯಲ್ಲಿ ಹೇಳಿರುವಂತೆ, ಚಿಟ್ಟೆ ಇಲ್ಲ ಅಂದ್ರೆ ಭೂಮಿನೆ ಇರಲ್ಲ. ಅದನ್ನ ರೂಪಕವಾಗಿಟ್ಟುಕೊಂಡು ಮಗು ಪ್ರಕೃತಿ ಜೊತೆ ಮಾತಾಡೋದು ಇದೆಯಲ್ಲ ತುಂಬ ಸುಂದರವಾದುದು. ಈಗ ಮನುಷ್ಯ ತನ್ನನ್ನು ತಾನು ಸರ್ವಶ್ರೇಷ್ಠನೆಂದುಕೊಂಡು, ತಾನು ಪ್ರಕೃತಿಗಿಂತ ದೊಡ್ಡವನೆಂದುಕೊಂಡು ವರ್ತಿಸುತ್ತಾನೆ. ನಾಟಕದ ರೂಪಕವಾದ ಈ ಚಿಟ್ಟೆ ಪ್ರಕೃತಿಯ ಒಂದು ಭಾಗ ಅವು ಇಲ್ಲಾಂದ್ರೆ ಭೂಮಿ ಮೇಲೆ ಸಸ್ಯ ಸಂಪತ್ತೇ ಇರೋದಿಲ್ಲ. ಸಸ್ಯ ಸಂಪತ್ತು ಇಲ್ಲಾಂದ್ರೆ ಜನರೂ ಇಲ್ಲ ಜೀವನವೂ ಇಲ್ಲ.ಈ ರೀತಿ ಉತ್ತಮ ಸಂದೇಶವಿರುವ ನಾಟಕಚಿಟ್ಟೆ, ಜೊತೆಗೆ ನಟನ ಏನರ್ಜಿ, ಧ್ವನಿ, ಭಾವಾಭಿನಯ ತುಂಬಾ ಚೆನ್ನಾಗಿದೆ. ಒಂದೂವರೆ ಗಂಟೆ ಅಭಿಸಿರುವ ಗೋಕುಲ ಸಹೃದಯನಲ್ಲಿ ಎಂಥ confidence wood mog good. He can be a very good actor in future. ಚಿಟ್ಟೆಯ ಮೂಲಕ ಸಹೃದಯ ಒಂದು ಹೊಸ ಕಥೆ ಹೇಳುತ್ತಿದ್ದಾನೆ ಎಂಬುದಾಗಿ ಹೇಳಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books