ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು

Author : ಚಂದ್ರಶೇಖರ ಕಂಬಾರ

Pages 112

₹ 130.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಪ್ರಾಚೀನ ಮತ್ತು ಸಮಕಾಲೀನಗಳ ನಡುವೆ ನಡೆಯುವ ಈ ವಿನಿಮಯವು ಕಾವ್ಯವನ್ನು ಅಲೌಕಿಕವನ್ನಾಗಿ ಮಾಡುತ್ತದೆ. ಊರಗೌಡನ ಕಿರಿಯಸೊಸೆಯು ತನ್ನನ್ನು ಬಲಿಯಾಗಿ ಅರ್ಪಣೆ ಮಾಡಿಕೊಂಡು ಕೆರೆಯಲ್ಲಿ ನೀರು ಬರುವಂತೆ ಮಾಡುತ್ತಾಳೆ, ಕನ್ನಡ ಕಾವ್ಯವು ಈ ಬಲಿದಾನವನ್ನು ಕೊಂಡಾಡುತ್ತದೆ. ಯಾವುದೇ ಒಂದು ಹಳ್ಳಿಯಲ್ಲಿ ಪ್ರತಿಯೊಂದು ಮನೆಯೂ ಹಲವು ಕತೆಗಳ ಉಗ್ರಾಣವಾಗಿರುತ್ತದೆ. ಮನೆಗಳು, ಬಾವಿ ಗದ್ದೆ ದೇವಾಲಯಗಳು ಮರಗಳು ಎಲ್ಲವನ್ನೂ ಕತೆಗಳು ಬೇಟೆಯಾಡಿವೆ. ಸ್ಥಳೀಯ ದೇವರುಗಳು ಹಟ್ಟಿಯ ಸುಂದರಿಯರನ್ನು ಮದುವೆಯಾಗುತ್ತಾರೆ. ಅಲೌಕಿಕವಾದದ್ದು ಸಹಜತೆಯೊಳಗೆ ಲೀನವಾಗಿ ಬಿಡುತ್ತದೆ. ವೈಷ್ಣವರ ಸುಪ್ರಸಿದ್ಧ ರಂಗನಾಥ ದೇವರು ಸೋಲಿಗ ಬುಡಕಟ್ಟಿನ ಅಳಿಯನಾಗುತ್ತಾನೆ. ಸ್ಥಳೀಯವಾದ ಘಟನೆ, ವಸ್ತುವನ್ನುಳ್ಳ ಕಾವ್ಯವು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ್ದು ಎನ್ನುವದು ನಿಜ. ದೇವರ ಈ ಮದುವೆಯು ಒಂದು ಐತಿಹಾಸಿಕ ಘಟನೆಯಲ್ಲ. ಅದು ಒಂದು ನಿರ್ದಿಷ್ಟ ಸ್ಥಳದ ಜನರಿಗೆ ಸಂಬಂಧಪಟ್ಟದ್ದು ಎಂದು ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books