ಸುಣ್ಣದ ಸುತ್ತು ಮತ್ತು ಅಳಿಲು ರಾಮಾಯಣ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 128

₹ 60.00




Year of Publication: 2002
Published by: ಲಿಪಿ ಪ್ರಕಾಶನ
Address: ಬೆಂಗಳೂರು

Synopsys

‘ಸುಣ್ಣದ ಸುತ್ತು ಮತ್ತು ಅಳಿಲು ರಾಮಾಯಣ’ ಎಚ್‌. ಎಸ್‌. ವೆಂಕಟೇಶ ಮೂರ್ತಿ ಅವರ ಮಕ್ಕಳ ನಾಟಕವಾಗಿದೆ. ಇನ್ನೊಂದು ಚಿಕ್ಕ ಅಳಿಲಿನ ಸೇವೆಯೂ ರಾಮಾಯಣದಲ್ಲಿ ಮಹತ್ತರ ಕಾಣಿಕೆಯಾಗಿ ದಾಖಲಾದುದು. ಹೀಗೆ ಮಕ್ಕಳಲ್ಲಿ ಹೃದಯವಂತಿಕೆ - ಸೇವಾ ಮನೋಭಾವ ತಿಳಿಸಿಕೊಡುತ್ತ ಸಾಗುವ ಕಿರುನಾಟಕವಾಗಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Reviews

ಹೊಸತು- 2003-ಎಪ್ರಿಲ್‌

ಎಳೆಯರ ಮನಸ್ಸನ್ನು ಬಹುವಾಗಿ ಆಕರ್ಷಿಸುವ ಇಲ್ಲಿನ ಎರಡು ನಾಟಕಗಳು ಈಗಾಗಲೇ ರಂಗದ ಮೇಲೂ ಅಭಿನಯಿಸಲ್ಪಟ್ಟು ಗಮನ ಸೆಳೆದಿವೆ. ಬೆಕ್ಸ್‌ನ ಕಕೇಷಿಯನ್ ಚಾಕ್ ಸರ್ಕಲ್ ನಾಟಕದ ಸಂದೇಶ ಹೃದಯಹೀನನಾದವನಿಗೆ ಯಾವುದೂ ದಕ್ಕುವುದಿಲ್ಲವೆಂಬುದು ಇಲ್ಲಿನ ಮೊದಲ ನಾಟಕದ ಧ್ವನಿ, ಇನ್ನೊಂದು ಚಿಕ್ಕ ಅಳಿಲಿನ ಸೇವೆಯೂ ರಾಮಾಯಣದಲ್ಲಿ ಮಹತ್ತರ ಕಾಣಿಕೆಯಾಗಿ ದಾಖಲಾದುದು. ಹೀಗೆ ಮಕ್ಕಳಲ್ಲಿ ಹೃದಯವಂತಿಕೆ - ಸೇವಾ ಮನೋಭಾವ ತಿಳಿಸಿಕೊಡುತ್ತ ಸಾಗುವ ಕಿರುನಾಟಕಗಳಿವು.

Related Books