ಚಿಟ್ಟೆ ಏಕವ್ಯಕ್ತಿ ಮಕ್ಕಳ ನಾಟಕ

Author : ಬೇಲೂರು ರಘುನಂದನ್

Pages 80

₹ 180.00




Year of Publication: 2022
Published by: ಶಾರದಾ ಪ್ರತಿಷ್ಟಾನ
Address: #239, 4ನೇ ಮುಖ್ಯರಸ್ತೆ, ಗಂಗಾನಗರ, ಬೆಂಗಳೂರು-560032
Phone: 3332482

Synopsys

ಚಿಟ್ಟೆ ಬೇಲೂರು ರಘುನಂದನ್‌ ರ ಏಕವ್ಯಕ್ತಿ ಮಕ್ಕಳ ನಾಟಕವಾಗಿದೆ. ಚಿಟ್ಟೆ ಇಲ್ಲ ಅಂದ್ರೆ ಭೂಮಿನೆ ಇರಲ್ಲ. ಅದನ್ನ ರೂಪಕವಾಗಿಟ್ಟುಕೊಂಡು ಮಗು ಪ್ರಕೃತಿ ಜೊತೆ ಮಾತಾಡೋದು ಇದೆಯಲ್ಲ ತುಂಬ ಸುಂದರವಾದುದು. ಈಗ ಮನುಷ್ಯ ತನ್ನನ್ನು ತಾನು ಸರ್ವಶ್ರೇಷ್ಠನೆಂದುಕೊಂಡು, ತಾನು ಪಕೃತಿಗಿಂತ ದೊಡ್ಡವನೆಂದುಕೊಂಡು ವರ್ತಿಸುತ್ತಾನೆ. ನಾಟಕದ ರೂಪಕವಾದ ಈ ಚಿಟ್ಟೆ ಪ್ರಕೃತಿಯ ಒಂದು ಭಾಗ. ಅವು ಇಲ್ಲಾಂದ್ರೆ ಭೂಮಿ ಮೇಲೆ ಸಸ್ಯ ಸಂಪತ್ತೇ ಇರೋದಿಲ್ಲ. ಸಸ್ಯ ಸಂಪತ್ತು ಇಲ್ಲಾಂದ್ರೆ ಜನರೂ ಇಲ್ಲ ಜೀವನವೂ ಇಲ್ಲ.ಈ ರೀತಿ ಉತ್ತಮ ಸಂದೇಶವಿರುವ ನಾಟಕಚಿಟ್ಟೆ, ಜೊತೆಗೆ ನಟನ ಎನರ್ಜಿ, ಧ್ವನಿ, ಭಾವಾಭಿನಯ ತುಂಬಾ ಚೆನ್ನಾಗಿದೆ. ಒಂದೂವರೆ ಗಂಟೆ ಅಭಿನಯಿಸಿರುವ ಗೋಕುಲ ಸಹೃದಯನಲ್ಲಿ ಎಂಥ confidence wood son.. good. He can be a very good actor in future. ಚಿಟ್ಟೆಯ ಮೂಲಕ ಸಹೃದಯ ಒಂದು ಹೊಸ ಕಥೆ ಹೇಳುತ್ತಿದ್ದಾನೆ ಎಂದು ಸಿ. ಬಸವಲಿಂಗಯ್ಯ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books