ಶಾಂತವೇರಿ ಗೋಪಾಲಗೌಡ; ನೆನಪಿನ ಸಂಪುಟ

Author : ಕಾಳೇಗೌಡ ನಾಗವಾರ

Pages 722

₹ 600.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಶಾಂತವೇರಿ ಗೋಪಾಲಗೌಡ; ನೆನಪಿನ ಸಂಪುಟವು 1997ರಲ್ಲಿ ಹಾಗೂ 2010 ರಲ್ಲಿ ಮುದ್ರಣ ಕಂಡಿದೆ. ಕನ್ನಡ ವಿ.ವಿ. ಕುಲಪತಿ ಡಾ. ಮಲ್ಲಿಕಾ ಘಂಟಿ ಈ ಕೃತಿಯ ಕುರಿತು ’ಭಾರತಕ್ಕೆ ಲೋಹಿಯಾ, ಕರ್ನಾಟಕಕ್ಕೆ ಶಾಂತವೇರಿ ಗೋಪಾಲಗೌಡರು. ಈ ಇಬ್ಬರೂ ಗಾಂಧೀಜಿಯ ಸಮಾಜವಾದಿ ಪ್ರಭಾವಕ್ಕೆ ಒಳಗಾಗಿದ್ದರೂ ದೇಶಾದ್ಯಂತ ಬೀರಿದ್ದು ಬೇರೆ ಬೇರೆ ಬೆಳಕಾಗಿ. ಗಾಂಧೀಜಿಯ ಚಿಂತನೆಯ ಪುನರ್ ಸೃಷ್ಟಿಯ ರೂಪವಾದ ಸಮಾಜವಾದವು ಒಂದು ಸೈದ್ಧಾಂತಿಕ ತಿಳಿವಳಿಕೆಯಾಗಿ ಗಟ್ಟಿಗೊಂಡಿದ್ದು ಸ್ಥಳೀಯ ಹೋರಾಟಗಳಿಂದ ಎಂಬುದನ್ನು ಮರೆಯುವಂತಿಲ್ಲ. ಅಂತಹ ಸ್ಥಳೀಯ ಹೋರಾಟದ ಸಂಕಥನ ರೂಪದಲ್ಲಿನಮಗೆ ಶಾಂತವೇರಿ ಗೋಪಾಲಗೌಡರು ಇದ್ದಾರೆ’ ಎನ್ನುವ ಮೂಲಕ ಅವರ ಚಿಂತನೆ-ಹೋರಾಟಗಳು ಇಂದಿಗೂ ಮಾದರಿ ಎಂದು, ಕೃತಿಯ ಮಹತ್ವ ಹೆಚ್ಚಿಸಿದ್ದಾರೆ.

ಗೋಪಾಲಗೌಡರ ಹೋರಾಟದಲ್ಲಿ ಭಾಗವಹಿಸಿ ದುಡಿದ ಕಾರ್ಯಕರ್ತರು, ಗೆಳೆಯರು, ರಾಜಕಾರಣಿಗಳು, ಲೇಖಕರು, ಕಲಾವಿದರು, ತಂತಮ್ಮ ಮನಸ್ಸುಗಳಲ್ಲಿ ತುಂಬಿಕೊಂಡ ಶಾಂತವೇರಿ ಅವರ ವ್ಯಕ್ತಿತ್ವವನ್ನು ತಾವು ಕಂಡಂತೆ ನೆನಪುಗಳ ಮೂಲಕ ಇಲ್ಲಿ ದಾಖಲಿಸಿದ್ದಾರೆ. ಸುಮಾರು ೩ ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಜೀವನವನ್ನು ಆವರಿಸಿಕೊಂಡಿದ್ದ ಗೋಪಾಲಗೌಡರ ವ್ಯಕ್ತಿತ್ವದ ವಿವಿಧ ಮುಖಗಳು ಈ ಗ್ರಂಥದಲ್ಲಿ ವಿವರವಾಗಿ ಚಿತ್ರಿಸಲ್ಪಟ್ಟಿದೆ. ಗೋಪಾಲ ಗೌಡರು, ಶಾಸಕರಾಗಿದ್ದ ಅವಧಿಯ ಭಾಷಣಗಳ ಮುಖ್ಯ ಭಾಗಗಳು, ಅವರ ಎರಡು ಲೇಖನಗಳು,1960 ನೇ ವರ್ಷದ ದಿನಚರಿಯ ಕೆಲವು ಪುಟಗಳೂ ಈ ಗ್ರಂಥದಲ್ಲಿವೆ. 

 

About the Author

ಕಾಳೇಗೌಡ ನಾಗವಾರ
(02 February 1947)

ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971)  ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.  ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು.  ಕಾಳೇಗೌಡ ನಾಗವಾರ ಅವರ ...

READ MORE

Related Books