ಸಂಪಾದಕರ ಸಂಪಾದಕ

Author : ಕೆ. ಕರಿಸ್ವಾಮಿ

Pages 120

₹ 100.00

Synopsys

ದೇಶ ಕಂಡ ಪ್ರಾಮಾಣಿಕ ಪತ್ರಕರ್ತ ರಾಘವನ್ ಅವರ ಸಂಸ್ಮರಣ ಗ್ರಂಥ ’ಸಂಪಾದಕರ ಸಂಪಾದಕ’. ರಾಘವನ್ ಅವರ ಇಡೀ ಪತ್ರಿಕಾ ಜೀವನವನ್ನು ರೂಪಿಸಿದ್ದ ಎರಡು ಅಂಶಗಳೆಂದರೆ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆ. ಪತ್ರಿಕೆಯೊಂದು ಯಶಸ್ಸು ಕಾಣಬೇಕೆಂದರೆ, ಓದುಗರನ್ನು ಆಕರ್ಷಿಸಬೇಕೆಂದರೆ ವೈವಿಧ್ಯಮಯ ಆಸಕ್ತಿಗಳ ಬಹುಮುಖ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕೆಲವೇ ಕೆಲವು ಸಂಪಾದಕರುಗಳಲ್ಲಿ ರಾಘವನ್ ಕೂಡ ಒಬ್ಬರಾಗಿದ್ದರು. ಇಂಗ್ಲಿಷ್ ಪತ್ರಿಕಾರಂಗದಲ್ಲಿ ದೀರ್ಘಕಾಲ ವೈಶಿಷ್ಟ್ಯಪೂರ್ಣವಾಗಿ ದುಡಿದ ಅವರು, ’ವಿಜಯ ಕರ್ನಾಟಕ’ಕ್ಕೂ, ಕನ್ನಡ ಪತ್ರಿಕಾರಂಗಕ್ಕೂ ಆಕಸ್ಮಿಕವಾಗಿ ಬಂದವರು.

ಆದರೆ ತಾವಿದ್ದ ಅತ್ಯಲ್ಪ ಕಾಲದಲ್ಲೇ ಕನ್ನಡ ಪತ್ರಿಕಾರಂಗದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿ, ತಾವು ಸಂಪಾದಕರಾಗಿದ್ದ ಪತ್ರಿಕೆಗೆ ಹೊಸತನವನ್ನೂ, ಇದರ ಹಿಂದೆ ದುಡಿಯುತ್ತಿದ್ದ ಪತ್ರಕರ್ತರ ತಂಡಕ್ಕೆ ವೃತ್ತಿಪರತೆಯನ್ನೂ ತಂದವರು ರಾಘವನ್.

ಈ ಕೃತಿಯಲ್ಲಿ ರಾಘವನ್ ಅವರ ಒಡನಾಟ, ಹಾಗೂ ಅವರ ಜೊತೆ ಕೆಲಸಮಾಡಿದ  ಅನುಭವದ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪತ್ರಕರ್ತರಾದ ಕೆ. ಕರಿಸ್ವಾಮಿ ಮತ್ತು ಬಿ.ಎಸ್. ಜಯಪ್ರಕಾಶ ನಾರಾಯಣ ಗ್ರಂಥದ ಸಂಪಾದಕರು. 

About the Author

ಕೆ. ಕರಿಸ್ವಾಮಿ
(15 June 1971)

.ಲೇಖಕ ಹಾಗೂ ಪತ್ರಕರ್ತ  ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021)  ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನ ಮೆರು ಇನ್ಫೋ ಸಲ್ಯೂಷನ್ಸ್,ನಲ್ಲಿ ಮುಖ್ಯ ಸಂಪಾದಕ,, ಟೈಮ್ಸ್ ಇಂಟರ್‍ನೆಟ್ ಲಿಮಿಟೆಡ್.ನಲ್ಲಿ ಉಪಸಂಪಾದಕ,  ಪ್ರಜಾಪ್ರಗತಿ ದಿನಪತ್ರಿಕೆಯ ಉಪ ಸಂಪಾದಕ, ನಂತರ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ವಿವಿಧ ...

READ MORE

Related Books