ಡಾ. ಎ. ಜಿ. ಸುಬ್ಬರಾವ್

Author : ಪ್ರಣತಾರ್ತಿಹರನ್

Pages 80

₹ 20.00




Year of Publication: 2001
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

ಹಾಸನಜಿಲ್ಲೆಯ ಬಸವಾಪಟ್ಟಣ ಗ್ರಾಮದಲ್ಲಿ ಡಾ. ಎ.ಜಿ. ಸುಬ್ಬರಾವ್ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಎರಡು ತಲೆಮಾರಿನ ಜನ ಅವರ ಸರಳ ಸುಲಭಚಿಕಿತ್ಸೆಯ ಫಲಾನುಭವಿಗಳು. ಜತೆಗೆ ಜನರನ್ನು ಸಂತೋಷವಾಗಿಟ್ಟಿದ್ದು ಅವರ ನಿರಂತರ ಹಾಸ್ಯಲಹರಿ. ಸ್ವಾತಂತ್ರ್ಯ ಹೋರಾಟಗಾರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನತಂತ್ರದ ಪರವಾದ ಹೋರಾಟಗಾರ; ಅದಕ್ಕಾಗಿ ಸೆರೆಮನೆಯನ್ನು ಕಂಡರು. ಸಂಘಟಕ, ಸಮಾಜಸೇವಕ, ಪತ್ರಿಕೆಗಳಿಗೆ ದೀರ್ಘಕಾಲ ಬರೆದರು. ಪುಸ್ತಕಗಳೂ ಪ್ರಕಟವಾದುವು. ಹಾಸ್ಯ, ವಿಡಂಬನೆ, ಚಿಂತನೆ, ಮುಪ್ಪುರಿಗೊಂಡುದು ಅವರ ಲೇಖನಗಳ ಲಕ್ಷಣ. ರಾಷ್ಟ್ರವಾದಿ, ಕಲಾವಿದ, ಭಾಷಣಕಾರ, ರೋಗಚಿಕಿತ್ಸಕ ಹೇಗೋ ಹಾಗೇ ಸಮಾಜ ಚಿಕಿತ್ಸಕ, ರಾಷ್ಟ್ರಚಿಕಿತ್ಸಕ. ಎಲೆಮರೆಯ ಕುಸುಮವಾಗಿಯೇ ಕೊನೆಗೊಂಡ ಅವರಿಗೆ ಅರ್ಪಿಸಿದ ಸ್ಮರಣ ಸಂಪುಟ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books