ಯಕ್ಷಬ್ರಹ್ಮ

Author : ಉಜಿರೆ ಅಶೋಕ ಭಟ್

Pages 200

₹ 210.00




Year of Publication: 2022
Published by: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ
Address: ಉಜಿರೆ, ಜಿಲ್ಲೆ: ದಕ್ಷಿಣ ಕನ್ನಡ
Phone: 9449510666

Synopsys

‘ಯಕ್ಷಬ್ರಹ್ಮ’ ಕೃತಿಯು ಉಜಿರೆ ಅಶೋಕ ಭಟ್ ಸಂಪಾದಿಸಿರುವ ಅಗರಿ ಸ್ಮೃತಿಗೌರವ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕುರಿಯ ವಿಠಲಶಾಸ್ತ್ರೀ ಅವರು, ಪೂಜ್ಯ ಹೆಗ್ಗಡೆಯವರ ಅನುಗ್ರಹದೊಂದಿಗೆ ಪ್ರಥಮ ಬಾರಿಗೆ ತೆಂಕಣದ ಧರ್ಮಸ್ಥಳ ಮೇಳ ಉಡುಪಿಯನ್ನು ದಾಟಿ ಉತ್ತರಕನ್ನಡಕ್ಕೆ ಸೀಮೋಲ್ಲಂಘನ ಮಾಡಿದ್ದು ದಾಖಲೆ. ನನ್ನ ಸೃಜನಶೀಲ ಚಿಂತನೆಗಳಿಗೆ ಇಂಬುಕೊಟ್ಟು ಹಾಡಿ, ನೃತ್ಯಾಭಿನವ, ಹಾವ-ಭಾವ-ರಸ ಪ್ರತಿಪಾದನೆಗಳಿಗೆ ಅಗರಿ ಅವರ ಭಾಗವತಿಕೆಯೂ, ನೆಡ್ಳೆಯವರ ಹಿಮ್ಮೇಳವೂ ಇಲ್ಲದಿರುತ್ತಿದ್ದರೆ ನಾನು ಇಷ್ಟೆಲ್ಲ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ. ಶೇಣಿ ಗೋಪಾಲಕೃಷ್ಣ ಅವರು ಕೃತಿಯ ಕುರಿತು, ಯಕ್ಷಗಾನ ತತ್ವವನ್ನೂ ಎಳ್ಳಿನಷ್ಟೂ ಬಿಡದೆ, ಸತ್ವವಾಗಿಸಿ ತನ್ನದೇ ಆದ ಕೊಡುಗೆಯಾಗಿ, ಪ್ರತ್ಯಕ್ಷಕ್ಕೆ ಭಿನ್ನವಾಗಿಯೂ ತತ್ವದರ್ಶನಕ್ಕೆ ಅದ್ವೈತವಾಗಿಯೂ ಇದ್ದ ‘ಅಗರಿ ಶೈಲಿ’ ಅದ್ವಿತೀಯವೂ ಆನಂದದಾಯಕವೂ ಆಗಿತ್ತೆಂಬ ಸ್ಮರಣೆ ಅರ್ಧಶತಮಾನದ ನಂತರವೂ ಉಳಿದಿದೆ, ಬೆಳೆದಿದೆ ಎಂದರೆ ಆ ಹಾಡುಗಾರಿಕೆಯ ಮೋಡಿ ಹೇಗಿರಬೇಕು? ಕಾವ್ಯಧಾರೆಯೇ ಲಕ್ಷಣ-ಲಕ್ಷಣಯುಕ್ತವಾಗಿ ಸಾಗಿ ಬಂದುದರಿಂದ ಉತ್ತಮ ಕಾವ್ಯವೆಂದು ಸಾಹಿತ್ಯ ಪ್ರಪಂಚದಲ್ಲಿ ಅಂಗೀಕರಿಸಲ್ಪಟ್ಟು ಅಗರಿ ಭಾಗವತರಲ್ಲಿ ಕವಿಯೂ ಪ್ರತ್ಯಕ್ಷನಾಗಿದ್ದಾನೆ! ‘ಸವಿಯನು ಶಬ್ದಿಸಲಾಗದು ಸವಿದೇ ನೋಡಬೇಕು.’ ಎನ್ನುತ್ತಾರೆ.

 

About the Author

ಉಜಿರೆ ಅಶೋಕ ಭಟ್

ಉಜಿರೆ ಅಶೋಕ ಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯವರು. ತಾಳಮದ್ದಳೆಯ ಪ್ರಬುದ್ಧ ಅರ್ಥಧಾರಿ, ಯಕ್ಷಗಾನ ಉಭಯ ತಿಟ್ಟಿನ ವೇಷಧಾರಿ, ಸಂಘಟಕ, ಪ್ರವಚನಕಾರ ಹಾಗೂ ಭಾಷಣಕಾರರು. ಬಾಲ್ಯದಿಂದಲೇ ಯಕ್ಷಗಾನ ರಂಗದಲ್ಲಿ ವಿಶೇಷ ಆಸಕ್ತರು. ಅವರಿಗೆ ಶೇಣಿ, ಪೆರ್ಲ, ಮೂಡಂಬೈಲು, ತೆಕ್ಕಟ್ಟೆ , ಸಾಮಗ, ಜೋಶಿ ಹೀಗೆ ಪ್ರಸಿದ್ದ ಅರ್ಥಧಾರಿಗಳ ಸಂಸರ್ಗವು ಉತ್ತಮ ತಾಳಮದ್ದಳೆ ಅರ್ಥಧಾರಿಯಾಗಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 43 ವರ್ಷಗಳಿಂದ ನಡೆಯುತ್ತಿರುವ ಪುರಾಣ ವಾಚನದಲ್ಲಿ 33 ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. 48 ವಾರಗಳ ಸಂಪೂರ್ಣ ಮಹಾಭಾರತ ಹಾಗೂ 18 ವಾರಗಳ ಸಂಪೂರ್ಣ ರಾಮಾಯಣ ತಾಳಮದ್ದಳೆ ಆಯೋಜನೆ ...

READ MORE

Related Books