ರಾಷ್ಟ್ರಕವಿ

Author : ಆರ್.ಜಿ. ಹಳ್ಳಿ ನಾಗರಾಜ್

Pages 136

₹ 70.00




Year of Publication: 2006
Published by: ಅನ್ವೇಷಣೆ ಪ್ರಕಾಶನ
Address: 10-11, ಮಾತಾ ತನಿಷಾ ಅಪಾರ್ಟ್ಸ್ ಮೆಂಟ್ಸ್, 4ನೇ ತಿರುವು, ಕೆ.ಎಸ್.ಆರ್.ಟಿ.ಸಿ ಲೇಔಟ್, ಚಿಕ್ಕಲಸಂದ್ರ- 560061
Phone: 99005 66020

Synopsys

ಲೇಖಕ ಆರ್,ಜಿ.ಹಳ್ಳಿ ನಾಗರಾಜ್ ಅವರ ಸಂಪಾದಿತ ಕೃತಿ ‘ರಾಷ್ಟ್ರಕವಿ. ರಾಷ್ಟ್ರಕವಿಗಳ ಕುರಿತಾದ ಈ ಕೃತಿ ಕನ್ನಡ ಸಾಹಿತ್ಯಲೋಕದ ಒಂದು ಹೊಸ ಅನ್ವೇಷಣೆ ಎನ್ನಬಹುದು. ನಮ್ಮ ನಾಡಿಗೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದಾರೆ. ಮೊದಲನೆಯವರು ಮಂಜೇಶ್ವರದ ಗೋವಿಂದ ಪೈಗಳು, ಎರಡನೆಯವರು ಕುವೆಂಪು. ಮೂರನೆಯವರು ಡಾ.ಜಿ.ಎಸ್. ಶಿವರುದ್ರಪ್ಪ. ಈ ಸಂತೋಷವನ್ನು ಜನಸಾಮಾನ್ಯರೆಲ್ಲರಿಗೂ ತಲುಪಿಸುವ ಉದ್ದೇಶ ವಾದ ಈ ಮೂವರು ಹಿರಿಯ ಕವಿಗಳ ಬಗ್ಗೆ ರಚಿತವಾದ ಬೇರೆ ಬೇರೆಯ ಲೇಖನಗಳನ್ನು ಆರಿಸಿ, ಆ ಕವಿಗಳ ಬಗ್ಗೆ ಅವರ ಅಭಿಮಾನಿಗಳು ರಚಿಸಿರುವ ಕವನಗಳನ್ನೂ ಪರಿಕಲ್ಪಿಸಿ ಒಂದು ಉತ್ತಮ ಪ್ರಕಟನೆಯನ್ನು ಹೊರತಂದಿದ್ದಾರೆ. 

About the Author

ಆರ್.ಜಿ. ಹಳ್ಳಿ ನಾಗರಾಜ್

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...

READ MORE

Related Books