ರಂಗವೆಂಕಟ

Author : ಎಂ. ಪ್ರಭಾಕರ ಜೋಷಿ

Pages 300

₹ 300.00




Year of Publication: 2010
Published by: ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಸಮಿತಿ
Address: ಕೊಡಿಯಾಲಬೈಲ್‌, ಮಂಗಳೂರು ದ.ಕ. -575 003.

Synopsys

ಲೇಖಕ ಡಾ. ಎಂ. ಪ್ರಭಾಕರ ಜೋಷಿ ಅವರು ಸಂಪಾದಿಸಿರುವ ಕೃತಿ ʻರಂಗವೆಂಕಟʼ. ಪುಸ್ತಕವು ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಗ್ರಂಥವಾಗಿದೆ. ಪುಸ್ತಕದ ಸಂಪಾದಕರ ನುಡಿಯಲ್ಲಿ, "ಶ್ರೀ ವೆಂಕಟರಾಯ ಐತಾಳರು ವಿವಿಧ ರಂಗಗಳಲ್ಲಿ ಗೈದ ಸಾಧನೆಯ ಚಿತ್ರಣ ಇಲ್ಲಿದೆ. ಜತೆಗೆ ಜೀವನ ರಂಗದ ಚಿತ್ರಣವಿದೆ. ಅವರು ಪ್ರವರ್ಶಿಸಿದ ಕ್ಷೇತ್ರಗಳ ಬಗೆಗೂ ಕೆಲವು ಲೇಖನಗಳಿವೆ. ಅವರ ತೀರ್ಥರೂಪರಾದ ರಂಗಯ್ಯ ಐತಾಳರ ಹೆಸರು ಆ ಮೂಲಕ ಐತಾಳ ಪರಂಪರೆಯನ್ನೂ ನೆನಪಿಸಿದಂತಾಗುವುದ ರಿಂದ, ಈ ಗ್ರಂಥಕ್ಕೆ ರಂಗ ವೆಂಕಟ ಎಂದು ಹೆಸರಿಟ್ಟಿದ್ದೇವೆ" ಎಂದು ಹೇಳಿದ್ದಾರೆ.

About the Author

ಎಂ. ಪ್ರಭಾಕರ ಜೋಷಿ

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...

READ MORE

Related Books