ಸರ್ ಎಂ. ವಿಶ್ವೇಶ್ವರಯ್ಯ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 285

₹ 523.00




Year of Publication: 2017
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್
Address: 'ಮಾಸ್ತಿ ಮನೆ ', ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆ ,. ೨ನೆಯ ಅಡ್ಡ ರಸ್ತೆ, ಗವಿಪುರದ ವಿಸ್ತರಣ, ಬೆಂಗಳೂರು-560019.

Synopsys

ಸರ್. ವಿಶ್ವೇಶ್ವರಯ್ಯ ಅವರ ನೂರನೇ ವರ್ಧಂತಿ ಅಂಗವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಂಪಾದಿಸಿದ ಕೃತಿ . ವಿವಿಧ ಲೇಖಕರು ಬರೆದ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮೊದಲು ಎ.ಎನ್. ಮೂರ್ತಿರಾವ್ ಅವರು ಭಾರತ ಸರ್ಕಾರದ ಯೋಜನಾ ಪತ್ರಿಕೆಗೆ ಆಂಗ್ಲ ಭಾಷೆಯಲ್ಲಿ ಈ ಕುರಿತು ಲೇಖನ ಬರೆದಿದ್ದು, ಅದನ್ನು ಕನ್ನಡದಲ್ಲೂ ಬರೆದುಕೊಟ್ಟಿದ್ದನ್ನೂ ಪ್ರಕಟಿಸಲಾಗಿದೆ. ಈ ಗ್ರಂಥದ ಬಹುಭಾಗವು ಜೀವನ ಪತ್ರಿಕೆಯ 1951ರ ಆಗಸ್ಟ್ ನಲ್ಲಿ ಪ್ರಕಟಿತ ’ಶ್ರೀ ವಿಶ್ವೇಶ್ವರಯ್ಯ’ ಎಂಬ ವಿಶಿಷ್ಟ ಸಂಕೆಯಲ್ಲಿ ಪ್ರಕಟಗೊಂಡ ಲೇಖನಗಳಿವೆ ಎಂದು ಕೃತಿಯ ಸಂಪಾದಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಉಲ್ಲೇಖಿಸಿದ್ದಾರೆ..ಎಂ.ವಿಶ್ವೇಶ್ವರಯ್ಯ ಅವರ ಬದುಕು-ವೃತ್ತಿ ಘನತೆ-ಸಾಧನೆ-ಮಾನವೀಯ ಮುಖ ಇತ್ಯಾದಿ ಕುರಿತು ತುಂಬಾ ವಿಸ್ತೃತವಾಗಿ ಬರೆದಿರುವ ಲೇಖನಗಳ ಕೃತಿ ಇದು.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books