ಕಥಾತಪಸ್ವಿ

Author : ಜಗದೀಶ.ಬ.ಹಾದಿಮನಿ

₹ 550.00




Year of Publication: 2021
Published by: ಹೊನ್ನಕುಸುಮ ಸಾಹಿತ್ಯ ವೇದಿಕೆ
Address: ಹುನಗುಂದ

Synopsys

‘ಕಥಾತಪಸ್ವಿ’ ಕೃತಿಯು ಜಗದೀಶ ಬ. ಹಾದಿಮನಿ, ಎಂ.ಡಿ ಚಿತ್ತರಗಿ, ರವಿ ಬ. ಹಾದಿಮನಿ ಅವರ ಅಬ್ಬಾಸ್ ಮೇಲಿನಮನಿಯವರ ಸಂಸ್ಮರಣ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಅಬ್ಬಾಸ ಮೇಲಿನಮನಿಯವರ ಸಾಹಿತ್ಯ ಕುರಿತ ಹಾಗೆ ಮರು ಓದು ಪ್ರಾರಂಭವಾಗಬೇಕು. ರಾಜಧಾನಿಯಿಂದ ದೂರವಿರುವ, ಸಾಹಿತ್ಯ ರಾಜಕಾರಣ ಅಬ್ಬಾಸರನ್ನು ಉಪೇಕ್ಷೆಗೆ ಒಳಪಡಿಸಿತು ಎನ್ನುವ ವಿಷಾದವಿದೆ. ಹೀಗಾಗಿ ನಮ್ಮಲ್ಲಿಯೇ ವಿಮರ್ಶಕರು ಹುಟ್ಟಬೇಕು. ಗಟ್ಟಿಯಾಗಿ ಬರೆಯುತ್ತಲೇ ರಾಜಧಾನಿಯ ಸಾಹಿತ್ಯ ರಾಜಕಾರಣಕ್ಕೆ ಉತ್ತರಕೊಡುವ ಜವಾಬ್ಧಾರಿಯನ್ನು ಯುವ ಬರಹಗಾರರು ಹೊರಬೇಕಿದೆ. ಇವರನ್ನು ನೆನಪಿಸಿಕೊಳ್ಳುವ ಈ ಮಹತ್ತರ ಕಾರ್ಯದಲ್ಲಿ ನನ್ನೊಳಗಿನ ಅಬ್ಬಾಸಣ್ಣನನ್ನು ಮತ್ತೊಮ್ಮೆ ನನ್ನೊಳಗೆ ಜೀವಂತಗೊಳಿಸಿದ್ದಾರೆ ಎಂದಿದ್ದಾರೆ ಮಲ್ಲಿಕಾ ಘಂಟಿಯವರು. ಕೃತಿಯ ಕುರಿತು ರಂಜಾ ದರ್ಗ ಅವರು, ಸಂವೇದನಾಶೀಲ ಸಾಹಿತ್ಯದಲ್ಲಿ ಮಾನವ ಸಂವೇದನೆಗಳಿರುತ್ತವೆ. ಅಬ್ಬಾಸ್ ಅವರು ತಮ್ಮ ಪರಿಸರದಲ್ಲಿನ ಮುಸ್ಲಿಂ ಜೀವನ ವಿಧಾನದ ಮೂಲಕ ಮಾನವ ಸಂವೇದನೆಯನ್ನು ಎತ್ತಿ ಹಿಡಿದಿದ್ದಾರೆ. ಸೃಜನಶೀಲ ಸಾಹಿತಿಗಳು ಎತ್ತಿ ಹಿಡಿಯಬೇಕದುದು ಈ ರೀತಿಯ ಮಾನವ ಸಂವೇದನೆಯನ್ನೇ. ಇಂಥ ಸಾಧನೆಯನ್ನು ಮಾಡಿದ ಅಬ್ಬಾಸರು ತಮ್ಮ ಕಥೆಗಳ ಮೂಲಕ ಅಮರರಾಗಿದ್ದಾರೆ ಎಂದಿದ್ದಾರೆ.

About the Author

ಜಗದೀಶ.ಬ.ಹಾದಿಮನಿ

ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ  ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ‌ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು:  ...

READ MORE

Related Books