ಅರಸಿಕರಲ್ಲ

Author : ಶಿವರಾಮ ಕಾರಂತ

Pages 159

₹ 86.00

Buy Now


Year of Publication: 2007
Published by: ಸಪ್ನ ಬುಕ್ ಹೌಸ್
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ಅರಸಿಕರಲ್ಲ. ರಷ್ಯಾ ಮತ್ತು ಪೂರ್ವ ಜರ್ಮನಿಗಳ ರಂಗ ನಿರೀಕ್ಷಣೆಯನ್ನು ಈ ಕೃತಿ ಒಳಗೊಂಡಿದೆ. ಕಲೆ, ಸಾಹಿತ್ಯ, ಚಿತ್ರಕಲೆ, ವಿಜ್ಞಾನ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಲೇಖಕರು, ರಂಗಭೂಮಿಯಲ್ಲೂ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲ; ಅದರಲ್ಲೂ ಪ್ರಭುತ್ವ ತೋರಿದ್ದು ಈ ಕೃತಿ ಸಾಕ್ಷಿ ನುಡಿಯುತ್ತದೆ. 

ರಷ್ಯಾ ಹಾಗೂ ಜರ್ಮನ್ ಜನತೆ ಆಸ್ತಿಕರಲ್ಲದವರು. ಅವರು ಕೇವಲ ಭೌತವಾದಿಗಳು. ಎಂಬ ಭಾವನೆ ಜನರಲ್ಲಿದೆ. ಅವರಿಗೂ ಬದುಕಿನ ಸವಿ ಗೊತ್ತಿದೆ. ಅದನ್ನು ವಸ್ತುವಾದಿ ರಾಷ್ಟ್ರಗಳಾದ ಕಮ್ಯುನಿಸ್ಟ್ ಜರ್ಮನಿ ಹಾಗೂ ರಷ್ಯ ದೇಶಗಳು ಹೇಗೆ ಸಾಧಿಸಿವೆ ಎಂಬುದನ್ನು ತೋರಿಸಲು ಈ ‘ಅರಸಿಕರಲ್ಲ’  ಹೆಸರು ನೀಡಿದ್ದಾಗಿ ಲೇಖಕರು ಸ್ಪಷ್ಟಪಡಿಸಿದ್ದಾರೆ. 

ಭಾರತ ಸರ್ಕಾರದ ಸಾಂಸ್ಕೃತಿಕ ಸಂಬಂಧ ಸಂಸ್ಥೆಯಿಂದ ದೇಶದ ಪ್ರತಿನಿಧಿಯಾಗಿ ಆ ದೇಶಗಳಿಗೆ ತೆರಳಿದ್ದ ಅವರು, ಆ ದೇಶಗಳ ಕಲೆ, ಸಂಸ್ಕೃತಿಗಳ ಅಧ್ಯಯನ ಮಾಡಿದ್ದರ ಮಾಹಿತಿ ಇದೆ.  ಬರ್ಲಿನ್ ದೇಶದ ರಂಗಭೂಮಿ, ಗೊಂಬೆ ಆಟಗಳು, ಸರ್ಕಸ್, ವೈಮಾರ್ ಹಾಗೂ ಲಿಪಿ ಜಿಗ್ ಗಳ ಸಂದರ್ಶನ, ಚಿತ್ರಶಾಲೆ, ವಸ್ತು ಸಂಗ್ರಹಾಲಯ ಇತ್ಯಾದಿಗಳ ವಿವರಗಳಿವೆ. ಮಾಸ್ಕೊದಲ್ಲಿಯ ಹೆರ್ಮಿಟೇಜ್ ಮ್ಯೂಜಿಯಂಗೆ ಭೇಟಿ ನೀಡಿ ವಾಸ್ತಶಿಲ್ಪ ಕಲೆ, ರಂಗ ಕಲೆಗಳ ಕುರಿತ ತಮ್ಮ ಒಳನೋಟಗಳ ಬರಹಗಳಿವೆ. ಜೊತೆಗೆ ರಂಗಕಲೆಗಳ ಕಪ್ಪು-ಬಿಳುಪು ಚಿತ್ರಗಳು ಗಮನ ಸೆಳೆಯುತ್ತವೆ. ಎಲ್ಲರೂ ಸಮಾನರು ಎಂದು ಹೇಳುವ ರಷ್ಯಾ ದೇಶದಲ್ಲಿಯ ಬಡತನದ ಚಿತ್ರವನ್ನೂ ನೀಡಿದ್ದಾರೆ.   

ಸಾಗರದ ಅಕ್ಷರ ಪ್ರಕಾಶನವು 1987ರಲ್ಲಿ (ಪುಟ:181) ಈ ಪ್ರವಾಸ ಕಥನವನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books