ದಡವ ನೆಕ್ಕಿದ ಹೊಳೆ

Author : ಶ್ರೀಪಾದ ಭಟ್‌ ಧಾರೇಶ್ವರ

Pages 168

₹ 200.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

‘ದಡವ ನೆಕ್ಕಿದ ಹೊಳೆ’ ಶ್ರೀ ಪಾದ ಭಟ್‌ ಅವರ ರಂಗ ಪಯಣದ ಕಥನವಾಗಿದೆ. ದಾರಿ ನೂರಾರಿವೆ ಬೆಳಕಿನ ಅರಮನೆಗೆ’ ಎನ್ನುವಂತೆ ಶ್ರೀಪಾದ ಭಟ್ ಅವರು ಬೆಳಕಿನ ದಿಕ್ಕಿನತ್ತ ಸಾಗಲು, ತಮ್ಮೊಂದಿಗೆ ಇತರರನ್ನೂ ಆ ಬೆಳಕಿನತ್ತ ಕರೆದೊಯ್ಯಲು ಆಯ್ದುಕೊಂಡದ್ದು ರಂಗಭೂಮಿಯನ್ನು. ಶ್ರೀಪಾದ ಭಟ್ಟರ ಆಲೋಚನೆಗೆ ರೆಕ್ಕೆ ಸಿಕ್ಕುವುದೇ ಜನ ಸಮೂಹದಲ್ಲಿ. ಹಾಗಾಗಿ ರಂಗಭೂಮಿಯ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿಯುತ್ತಾರೆ. ಇವರು ರಂಗಭೂಮಿಯ ಮೂಲಕ ನಮ್ಮೊಳಗೆ ಒಂದು ತುಮುಲವನ್ನು ಹುಟ್ಟುಹಾಕುತ್ತಾರೆ. ಪ್ರಶ್ನೆಗಳನ್ನು ಕೂರಿಸುತ್ತಾರೆ. ಅದಕ್ಕೆ ಉತ್ತರ ಪಡೆಯುವ ದಿಕ್ಕಿನಲ್ಲಿ ನಮ್ಮನ್ನು ನಿರಂತರ ಪಯಣಿಗರನ್ನಾಗಿಸುತ್ತಾರೆ. ಶ್ರೀಪಾದ್ ಭಟ್ ಅವರ ಇಂತಹ ರಂಗ ಪಯಣದ ಕಥೆಯೇ- ‘ದಡವ ನೆಕ್ಕಿದ ಹೊಳೆ’.

About the Author

ಶ್ರೀಪಾದ ಭಟ್‌ ಧಾರೇಶ್ವರ

ಶ್ರೀಪಾದ ಭಟ್‌ ಧಾರೇಶ್ವರ ಅವರು ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದವರು. ಇತ್ತೀಚೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ಪೂರ್ಣಾವಧಿ ರಂಗಭೂಮಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡದ ರಂಗಭೂಮಿಯ ಕುರಿತು ಮೌಲಿಕವಾದ ಸಂಶೋಧನೆ ಮಾಡಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜನಪದ ಅಧ್ಯಯನ, ಸಂಗೀತ, ಸಂಘಟನೆ ಹೀಗೆ ಹಲವು ರಂಗಗಳಲ್ಲಿ ಆಸಕ್ತಿಹೊಂದಿದ್ದಾರೆ. ಕೃತಿಗಳು: ದಡವ ನೆಕ್ಕಿದ ಹೊಳೆ ...

READ MORE

Related Books