ಹಾವೇರಿ ಜಿಲ್ಲಾ ರಂಗಮಾಹಿತಿ

Author : ಸತೀಶ ಕುಲಕರ್ಣಿ

Pages 144

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಹಾವೇರಿ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಮುಖ್ಯವಾಗಿ ಹಾವೇರಿ ಜಿಲ್ಲಾ ರಂಗ ಮಾಹಿತಿ, ಜನಪದ ರಂಗಭೂಮಿ, ಜಿಲ್ಲೆಯ ದೊಡ್ಡಾಟದ ತಂಡಗಳು, ವೃತ್ತಿ ರಂಗಭೂಮಿಯ ಪ್ರಮುಖ ತಂಡಗಳು, ಜಿಲ್ಲೆಯ ಹವ್ಯಾಸಿ ರಂಗಭೂಮಿ, ಪ್ರಮುಖ ಹವ್ಯಾಸಿ ತಂಡಗಳ ಮಾಹಿತಿ, ಜಿಲ್ಲೆಯ ಹವ್ಯಾಸಿ ವೃತ್ತಿ ಹಾಗೂ ಜನಪದ ರಂಗಭೂಮಿ ಕಲಾವಿದರು, ಗ್ರಾಮಾಂತರ ಹವ್ಯಾಸಿ ಕಲಾತಂಡಗಳು, ಜಿಲ್ಲೆಯ ಗ್ರಾಮಾಂತರ ಹವ್ಯಾಸಿ ವೃತ್ತಿ ರಂಗಭೂಮಿ ಸಂಗೀತಗಾರರು, ಜಿಲ್ಲೆಯ ನಾಟಕಕಾರರು, ಮಕ್ಕಳ ರಂಗಭೂಮಿ, ಮಕ್ಕಳ ರಂಗಭೂಮಿಯ ಇನ್ನಿಷ್ಟು ಸಂಗತಿಗಳ ಕುರಿತು ಈ ಕೃತಿಯು ಚಿತ್ರಣ ನೀಡಿದೆ.

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books