ಚೂಡಾಮಣಿ

Author : ಆಶಾ ರಘು

Pages 80

₹ 80.00




Year of Publication: 2019
Published by: ಸಾಹಿತ್ಯ ಲೋಕ ಪ್ರಕಾಶನ
Address: #745, 12ನೇ ಮುಖ್ಯರಸ್ತೆ,3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು
Phone: 9945939436

Synopsys

ರಾಮ- ಸೀತೆಯ ಮದುವೆ ವನವಾಸ ಸೀತಾ ಅಪಹರಣ ರಾವಣ ಹತ್ಯೆಗಳು ಇರುವ ರಾಮಾಯಣ ಎಲ್ಲರಿಗೂ ತಿಳಿದ ಸಂಗತಿ. ಇದೇ ರಾಮಾಯಣವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿದ್ದಾರೆ ಆಶಾ ರಘು ಅವರು. ಶಾಕುಂತಲ ನಾಟಕದಲ್ಲಿ ಉಂಗುರ ಪ್ರೇಮ ಸಂಕೇತವಾಗಿತ್ತು. ಅವರಿಬ್ಬರ ಪ್ರೀತಿಯನ್ನು ನೆನಪಿಸಿದ್ದು ಅದೇ ಉಂಗುರವೇ. ಇದೇ ಧಾಟಿಯಲ್ಲಿ ಲೇಖಕರು ಚೂಡಾಮಣಿಯನ್ನು ಕಥಾ ವಸ್ತುವನ್ನಿಟ್ಟುಕೊಂಡು ಕಥೆಯನ್ನು ಹೆಣೆದಿದ್ದಾರೆ. ಭಾರತದ ಪ್ರಾಚೀನ ಕಾವ್ಯ ವಸ್ತುಗಳನ್ನು ಹೊಸ ಕಾಲಘಟ್ಟದಲ್ಲಿ ಹೊಸದಾಗಿ ರೂಪಾಂತರಿಸುವ ಪ್ರಯತ್ನ ಈ ಹಿಂದೆಯೂ ನಡೆದಿದೆ. ಈ ಕೃತಿಯಲ್ಲಿ ಲೇಖಕರು ಪ್ರಾಚೀನ ಕಾವ್ಯತಂತ್ರಗಳನ್ನು ಹೊಸ ಕಾವ್ಯ ನಾಟಕಗಳಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದಾರೆ.

About the Author

ಆಶಾ ರಘು
(18 June 1979)

ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ...

READ MORE

Conversation

Related Books